Asianet Suvarna News Asianet Suvarna News

ಬಿಎಸ್‌ವೈ ಆಸ್ಪತ್ರೆಗೆ ದಾಖಲು: ಚಿತ್ರರಂಗದ ಪ್ರಮುಖರಿಂದ ಸಿಎಂ ಭೇಟಿ ಮುಂದೂಡಿಕೆ

ಚಿತ್ರರಂಗದ ಪ್ರಮುಖರ ಜೊತೆ ಮಂಗಳವಾರ ಸಿಎಂ ಭೇಟಿ ನಿಗದಿಯಾಗಿತ್ತು. ಅದರೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಚಿತ್ರರಂಗದ ಪ್ರಮುಖರಿಂದ ಸಿಎಂ ಭೇಟಿ ಮುಂದೂಡಿಕೆ ಮಾಡಲಾಗಿದೆ. ಸಿಎಂ ಗುಣಮುಖರಾದ ಬಳಿಕ ಶಿವಣ್ಣ ನೇತೃತ್ವದಲ್ಲಿ ಭೇಟಿಯಾಗಲಿದ್ದಾರೆ. 

ಬೆಂಗಳೂರು (ಆ. 03): ಚಿತ್ರರಂಗದ ಪ್ರಮುಖರ ಜೊತೆ ಮಂಗಳವಾರ ಸಿಎಂ ಭೇಟಿ ನಿಗದಿಯಾಗಿತ್ತು. ಅದರೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಚಿತ್ರರಂಗದ ಪ್ರಮುಖರಿಂದ ಸಿಎಂ ಭೇಟಿ ಮುಂದೂಡಿಕೆ ಮಾಡಲಾಗಿದೆ. ಸಿಎಂ ಗುಣಮುಖರಾದ ಬಳಿಕ ಶಿವಣ್ಣ ನೇತೃತ್ವದಲ್ಲಿ ಭೇಟಿಯಾಗಲಿದ್ದಾರೆ. 

ಲಾಕ್‌ಡೌನ್ ನಿಂದಾಗಿ ಚಿತ್ರರಂಗದ ಕಾರ್ಮಿಕರು ಸಂಕಷ್ಟದಲ್ಲಿದ್ದರು. ಶೂಟಿಂಗ್‌ಗೆ ಅನುಮತಿ ನೀಡಿದ್ದರೂ ಸಹ ಕೆಲವೇ ಜನರ ಮಿತಿ ಇರುವುದರಿಂದ ಎಲ್ಲರಿಗೂ ಕೆಲಸ ಸಿಗುತ್ತಿಲ್ಲ. ಹಾಗಾಗಿ ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ಕೊಡುವಂತೆ ಮನವಿ ಸಲ್ಲಿಸಲು ಪ್ರಮುಖರು ಮುಂದಾಗಿದ್ದರು. ಇದೀಗ ಭೇಟಿ ಮುಂದೂಡಿಕೆಯಾಗಿದೆ. 

ಕೋವಿಡ್ 19: ಸಿಎಂ ಯಡಿಯೂರಪ್ಪ ಚೇತರಿಕೆಗೆ ರಾಜಕೀಯ ಗಣ್ಯರಿಂದ ಪ್ರಾರ್ಥನೆ
 

Video Top Stories