Asianet Suvarna News Asianet Suvarna News

ಕೆಆರ್‌ಎಸ್‌ನಲ್ಲಿ ಸುಮಲತಾ ರೌಂಡ್ಸ್, ಬಿರುಕಿನ ಬಗ್ಗೆ ಪರಿಶೀಲನೆ

 ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಶ್, ಇಂದು ಕೆಆರ್‌ಎಸ್ ಹಾಗೂ ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಕೆಆರ್‌ಎಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. 
 

ಬೆಂಗಳೂರು (ಜು. 14): ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಶ್, ಇಂದು ಕೆಆರ್‌ಎಸ್ ಹಾಗೂ ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಕೆಆರ್‌ಎಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. 

ಮಂಡ್ಯದಲ್ಲಿ ಮೂರು ಹೋರಾಟ; ಸಂಸದೆ ಸುಮಲತಾ ನಡೆಗೆ ನಡುಗಿದ ಸಕ್ಕರೆ ನಗರ!

'ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವ ಕಾರಣ ನನ್ನ ಹಾಗೂ ನನ್ನ ಜೊತೆ ಇರುವವರು ಟಾರ್ಗೆಟ್ ಆಗುತ್ತಿದ್ದಾರೆ. ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ, ಇದರಿಂದ ನನಗೆ ಇನ್ನಷ್ಟು ಶಕ್ತಿ ಬಂದಿದೆ' ಎಂದು ಈಗಾಗಲೇ ಹೇಳಿದ್ದಾರೆ.