Asianet Suvarna News Asianet Suvarna News

ಬಾರದ ಕುಟುಂಬಸ್ಥರು; ತಾವೇ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಸಾರ್ವಜನಿಕರು

ಶವಸಂಸ್ಕಾರಕ್ಕೂ ತಟ್ಟಿದೆ ಕೊರೊನಾ ಬಿಸಿ..!ಸೋಂಕಿಲ್ಲದ ವ್ಯಕ್ತಿಯ ಅಂತ್ಯಕ್ರಿಯೆಗೂ ಕುಟುಂಬಸ್ಥರು ಆಗಮಿಸಿಲ್ಲ. ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಸಾರ್ವಜನಿಕರೇ ಅಂತ್ಯಕ್ರಿಯೆ ಮಾಡಿದ್ದಾರೆ. ಮಡಿಕೇರಿಯಲ್ಲಿ ಇಂತಹದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಅನಾರೋಗ್ಯದಿಂದ ಗೋಪಾಲಪುರ ನಿವಾಸಿ ಮೃತಪಟ್ಟಿದ್ದಾರೆ. 
 

ಬೆಂಗಳೂರು (ಜು. 06): ಶವಸಂಸ್ಕಾರಕ್ಕೂ ತಟ್ಟಿದೆ ಕೊರೊನಾ ಬಿಸಿ..!ಸೋಂಕಿಲ್ಲದ ವ್ಯಕ್ತಿಯ ಅಂತ್ಯಕ್ರಿಯೆಗೂ ಕುಟುಂಬಸ್ಥರು ಆಗಮಿಸಿಲ್ಲ. ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಸಾರ್ವಜನಿಕರೇ ಅಂತ್ಯಕ್ರಿಯೆ ಮಾಡಿದ್ದಾರೆ. ಮಡಿಕೇರಿಯಲ್ಲಿ ಇಂತಹದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಅನಾರೋಗ್ಯದಿಂದ ಗೋಪಾಲಪುರ ನಿವಾಸಿ ಮೃತಪಟ್ಟಿದ್ದಾರೆ.

ಕೊರೋನಾ ಕಾಟ: ಬೆಂಗಳೂರಿಗರ ಜೀವದ ಜೊತೆ ಆಟ ಆಡ್ತಿದ್ಯಾ ಆಸ್ಪತ್ರೆಗಳು..? 

ಇವರಿಗೆ ಕೊರೊನಾ ಇರಲಿಲ್ಲ. ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೂ ಅಂತ್ಯಕ್ರಿಯೆಗೆ ಕುಟುಂಬಸ್ಥರು ಆಗಮಿಸಿರಲಿಲ್ಲ. ಕೊನೆಗೆ ಸಾರ್ವಜನಿಕರೇ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 

Video Top Stories