Asianet Suvarna News Asianet Suvarna News

ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ: ಸಹೋದರರ ಜೊತೆ ಜಾರಕಿಹೊಳಿ ರಹಸ್ಯ ಸಭೆ

ಮಂತ್ರಿಸ್ಥಾನ ಪಡೆಯಲೇಬೇಕು ಎಂದು ರಮೇಶ್ ಜಾರಕಿಹೊಳಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕುರಿತು ಸಹೋದರರ ಜೊತೆ ತಡರಾತ್ರಿಯವರೆಗೆ ಚರ್ಚಿಸಿದ್ದಾರೆ.

ಬೆಂಗಳೂರು (ಜೂ. 28): ಮಂತ್ರಿಸ್ಥಾನ ಪಡೆಯಲೇಬೇಕು ಎಂದು ರಮೇಶ್ ಜಾರಕಿಹೊಳಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕುರಿತು ಸಹೋದರರ ಜೊತೆ ತಡರಾತ್ರಿಯವರೆಗೆ ಚರ್ಚಿಸಿದ್ದಾರೆ.

'ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಸಹೋದರರು ಸಲಹೆ ನೀಡಿದ್ದಾರೆ ಎಂದು ಆಪ್ತವಲಯಗಳಿಂದ ತಿಳಿದು ಬಂದಿದೆ. ಸಿಎಂ ಬಿಎಸ್‌ವೈ ಹಾಗೂ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡು. ಬಳಿಕ ಹೈಕಮಾಂಡ್ ಭೇಟಿ ಮಾಡಿ ಆಗಿರುವ ಅನ್ಯಾಯದ ಬಗ್ಗೆ ವಿವರಿಸುವಂತೆ ಸಹೋದರರು ಸಲಹೆ ನೀಡಿದ್ಧಾರಂತೆ. ಆಯ್ತು ನೋಡೋಣ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.