Asianet Suvarna News Asianet Suvarna News

Covid 19: ಕೇಸ್ ಕಡಿಮೆಯಿದ್ದಾಗ ಲಾಕ್‌ಡೌನ್, ಹೆಚ್ಚಾದಾಗ ರದ್ದು, ಅವೈಜ್ಞಾನಿಕ ರೂಲ್ಸ್: ಡಿಕೆಶಿ

ವೀಕೆಂಡ್ ಕರ್ಫ್ಯೂ (Weekend Curfew) ರದ್ದು ನಿರ್ಧಾರಕ್ಕೆ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ಕೊಟ್ಟಿದ್ದಾರೆ. 

ಬೆಂಗಳೂರು (ಜ. 22): ವೀಕೆಂಡ್ ಕರ್ಫ್ಯೂ (Weekend Curfew) ರದ್ದು ನಿರ್ಧಾರಕ್ಕೆ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ಕೊಟ್ಟಿದ್ದಾರೆ. 

'ಕೇಸ್ ಕಡಿಮೆ ಇದ್ದಾಗ ಲಾಕ್‌ಡೌನ್ ಅಂತಾರೆ. ಈಗ ಕೇಸ್ ಹೆಚ್ಚಾಗುತ್ತಿದೆ, ವೀಕೆಂಡ್ ಕರ್ಫ್ಯೂ ರದ್ದು ಮಾಡಿದ್ದಾರೆ. ಮೆಟ್ರೋ, ಬಸ್‌ಗಳಿಗೆ 100 ರಷ್ಟು ಭರ್ತಿಗೆ ಅವಕಾಶ ಕೊಟ್ಟಿದ್ದಾರೆ. ಹೊಟೇಲ್, ಥಿಯೇಟರ್‌ಗೆ ಮಾತ್ರ 50:50 ಅಂತೆ, ಇದ್ಯಾವ ರೀತಿ ನ್ಯಾಯ ರೀ..? ಜನರು ಈಗಾಗಲೇ ಸಾಕಷ್ಟು ನಷ್ಟವಾಗಿದೆ. ಅವೈಜ್ಞಾನಿಕವಾಗಿ ಸರ್ಕಾರ ರೂಲ್ಸ್‌ಗಳನ್ನು ತರುತ್ತಿದೆ' ಎಂದು ಡಿಕೆಶಿ ವಾಗ್ದಾಳಿ ನಡೆಸಿದರು. 

Covid 3rd Wave: ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ಆತಂಕವಿಲ್ಲ: ಸಿಎಂ ಬೊಮ್ಮಾಯಿ

ಬಹುಚರ್ಚಿತ ವಾರಾಂತ್ಯದ ಕಫ್ರ್ಯೂ (Weekend Curfew) ತಕ್ಷಣದಿಂದ ಜಾರಿಗೆ ಬರುವಂತೆ ನಾಡಿನಾದ್ಯಂತ ರದ್ದುಗೊಳಿಸಲಾಗಿದೆ.  ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ, ಹಾಲಿ ಜಾರಿಯಲ್ಲಿರುವ ರಾತ್ರಿ ಕಫ್ರ್ಯೂ ಮತ್ತು ಚಿತ್ರಮಂದಿರ, ಪಬ್‌, ಬಾರ್‌, ಹೋಟೆಲ್‌ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಸಾಮರ್ಥ್ಯದ ಶೇ.50ರಷ್ಟು ಮಿತಿ. ರಾರ‍ಯಲಿ, ಪ್ರತಿಭಟನೆ ನಿಷೇಧ ಸೇರಿದಂತೆ ಉಳಿದೆಲ್ಲಾ ನಿರ್ಬಂಧ ಯಥಾವತ್‌ ಮುಂದುವರಿಕೆಯಾಗಿದೆ. 

Video Top Stories