ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧದ ಆದೇಶವಿದ್ರೂ ಕುಕ್ಕೆಗೆ ಬಂದ ಭಕ್ತರು..!
ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ವಿಚಾರವಾಗಿ ಸರ್ಪ ಸಂಸ್ಕಾರ ಸೇವೆಗೆ ಕುಕ್ಕೆಗೆ ಆಗಮಿಸಿದ ಭಕ್ತರಲ್ಲಿ ಗೊಂದಲ ಉಂಟಾಯಿತು.
ಮಂಗಳೂರು(ಏ. 21): ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ವಿಚಾರವಾಗಿ ಸರ್ಪ ಸಂಸ್ಕಾರ ಸೇವೆಗೆ ಕುಕ್ಕೆಗೆ ಆಗಮಿಸಿದ ಭಕ್ತರಲ್ಲಿ ಗೊಂದಲ ಉಂಟಾಯಿತು. ದೂರದ ಊರುಗಳಿಂದ ಸರ್ಪಸಂಸ್ಕಾರ ಪೂಜೆ ನೆರವೇರಿಸಲು ಭಕ್ತಾದಿಗಳು ಆಗಮಿಸಿದ್ದರು. ಆದರೆ ಸರಕಾರದ ಆದೇಶದ ಹಿನ್ನಲೆಯಲ್ಲಿ ಎಲ್ಲಾ ಸೇವೆಗಳು ಬಂದ್ ಆಗಿವೆ.
ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರನ್ನು ಭಕ್ತಾದಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಭಕ್ತರ ಮನವೊಲಿಸಿ, ದೇವರ ಪ್ರಸಾದ ನೀಡಿ ಕಳುಹಿಸಿದೆ ಆಡಳಿತ ಮಂಡಳಿ.