Asianet Suvarna News Asianet Suvarna News

ಕೋವಿಡ್ ಸೋಂಕಿತೆಗೆ ಚಿಕಿತ್ಸೆ ನೀಡದೆ ಹೊರಹಾಕಿದ ಮಲ್ಯ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆ ಸಿಗದೆ ಸೋಂಕಿತ ಮಹಿಳೆಯೊಬ್ಬರು ಫುಟ್‌ಪಾತ್ ಮೇಲೆ ನರಳಾಡಿದ್ದಾರೆ. ಮಲ್ಯ ಆಸ್ಪತ್ರೆ ಸಿಬ್ಬಂದಿ ಸೋಂಕಿತೆಯೊಬ್ಬರನ್ನು ಹೊರ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ಧಾರೆ. 
 

ಬೆಂಗಳೂರು (ಏ. 13): ಇಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆ ಸಿಗದೆ ಸೋಂಕಿತ ಮಹಿಳೆಯೊಬ್ಬರು ಫುಟ್‌ಪಾತ್ ಮೇಲೆ ನರಳಾಡಿದ್ದಾರೆ. ಮಲ್ಯ ಆಸ್ಪತ್ರೆ ಸಿಬ್ಬಂದಿ ಸೋಂಕಿತೆಯೊಬ್ಬರನ್ನು ಹೊರ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ಧಾರೆ. ವಾರಕ್ಕೆರಡು ಬಾರಿ ಡಯಾಲಿಸಿಸ್‌ಗೆಂದು ಬರುತ್ತಿದ್ದರು ಈ ಮಹಿಳೆ. ಮೊನ್ನೆ ಕೋವಿಡ್ ಟೆಸ್ಟ್ ವೇಳೆ ಸೋಂಕು ದೃಢವಾಗಿದೆ. ಜ್ವರಕ್ಕೂ ಚಿಕಿತ್ಸೆ ನೀಡಿಲ್ಲ. ಡಯಾಲಿಸಿಸ್ ಕೂಡಾ ಮಾಡದೇ ಮಹಿಳೆಯನ್ನು ಹೊರ ಹಾಕಿದ್ಧಾರೆ. 

ಲಾಕ್‌ಡೌನ್ ಆಗುತ್ತಾ.? ಏ. 18 ಕ್ಕೆ ಮಹತ್ವದ ಸಭೆ ಬಳಿಕ ನಿರ್ಧಾರ
 

Video Top Stories