ಈ ಹೊಟೇಲ್ನಲ್ಲಿ ದಲಿತರಿಗೆ ಪ್ರತ್ಯೇಕ ತಟ್ಟೆ, ದೂರ ಇರು ದಲಿತ ಅಂತಾರೆ ಮಂದಿ!
ನಾವು ಎಷ್ಟೇ ಮುಂದುವರೆದಿದ್ದೇವೆ, ಜಾತ್ಯಾತೀತರು ಎಂದು ಹೇಳಿಕೊಂಡರೂ, ಇನ್ನೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದರ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ಮಾಡಿ ಪ್ರಸಾರವನ್ನೂ ಮಾಡಿತ್ತು.
ಬೆಂಗಳೂರು (ಅ. 09): ನಾವು ಎಷ್ಟೇ ಮುಂದುವರೆದಿದ್ದೇವೆ, ಜಾತ್ಯಾತೀತರು ಎಂದು ಹೇಳಿಕೊಂಡರೂ, ಇನ್ನೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದರ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ಮಾಡಿ ಪ್ರಸಾರವನ್ನೂ ಮಾಡಿತ್ತು. ಇದೀಗ ಅಂತಹದೇ ಆಚರಣೆ ಬಳ್ಳಾರಿಯ ದೇವಸಮುದ್ರ ಎಂಬಲ್ಲಿ ದಲಿತರನ್ನು ಈಗಲೂ ಕೀಳಾಗಿ ನೋಡುತ್ತಾರೆ. ದಲಿತರಿಗೆ ಇಲ್ಲಿ ಕುಡಿಯುವ ನೀರು, ಊಟಕ್ಕೆ ಪ್ರತ್ಯೇಕವಾಗಿ ತಟ್ಟೆ, ಲೋಟ ಇಡಲಾಗಿದೆ.
ಕವರ್ ಸ್ಟೋರಿ ಇಂಪ್ಯಾಕ್ಟ್: ಅಸ್ಪೃಶ್ಯತೆ ಜೀವಂತವಾಗಿರುವ ಚಿತ್ರದುರ್ಗದ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ