ಕವರ್ ಸ್ಟೋರಿ ಖೆಡ್ಡಾಗೆ ಬಿತ್ತು ವಿಜಯನಗರ ಸಾಮ್ರಾಜ್ಯದ ಮುತ್ತು ರತ್ನಗಳನ್ನು ಮಾರುತ್ತಿದ್ದ ಗ್ಯಾಂಗ್..!
ನೆರೆಯ ಆಂಧ್ರದ ತಂಡವೊಂದು ವಿಜಯನಗರ ಸಾಮ್ರಾಜ್ಯದ ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲು ಸಂಚು ರೂಪಿಸುತ್ತಿದೆ ಎಂದು ತಿಳಿದ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಅದರ ಬಗ್ಗೆ ಕಾರ್ಯಾಚರಣೆಗಿಳಿಯಿತು.
ಬೆಂಗಳೂರು (ಅ. 24): ನೆರೆಯ ಆಂಧ್ರದ ತಂಡವೊಂದು ವಿಜಯನಗರ ಸಾಮ್ರಾಜ್ಯದ ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲು ಸಂಚು ರೂಪಿಸುತ್ತಿದೆ ಎಂದು ತಿಳಿದ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಅದರ ಬಗ್ಗೆ ಕಾರ್ಯಾಚರಣೆಗಿಳಿಯಿತು. ಗ್ರಾಹಕರ ಸೋಗಿನಲ್ಲಿ ಅವರನ್ನು ಸಂಪರ್ಕಿಸಲಾಯಿತು. ಆಗ 3 ಸಾವಿರ ಕೆಜಿಯ ಬೆಳ್ಳಿ ವಿಗ್ರಹ, ನೂರಾರು ಕೋಟಿ ಬೆಲೆ ಬಾಳುವ ಮುತ್ತು ರತ್ನಗಳು, ಮಹಾರಾಣಿಯರ ಜರಿ ಸೀರೆಗಳು ಅವರ ಬಳಿಯಿವೆ ಎನ್ನುವ ಮಾಹಿತಿ ಸಿಕ್ಕಿತು.
ಬಹುತೇಕ ರೈತರನ್ನು ತಲುಪದ ಸಾಲಮನ್ನಾ ಹಣ; ಅಧಿಕಾರಿಗಳ ಜೇಬು ಸೇರಿತು ಕಾಂಚಾಣ
ಒಂದೆರಡು ಸಲ ಮಾತುಕತೆ ನಂತರ ಈ ಗ್ಯಾಂಗ್ ಚಾಮರಾಜಪೇಟೆಯಲ್ಲಿರುವ ಮಹಿಳೆಯೊಬ್ಬರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆ ಮಹಿಳೆ ಮಾತನಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಬಹಳ ಖತರ್ನಾಕ್ ಮಹಿಳೆ ಎಂಬುದು ಮಾತಿನಲ್ಲಿ ಗೊತ್ತಾಗುತ್ತದೆ. ನಂತರ ಗ್ಯಾಂಗ್ ಸಿಕ್ಕಿ ಬಿದ್ದಿದ್ಹೇಗೆ? ಇಂಟರೆಸ್ಟಿಂಗ್ ಕಾರ್ಯಾಚರಣೆ ಹೇಗಿತ್ತು ನೋಡೋಣ ಬನ್ನಿ...!