ಸಮಿತಿ ವರದಿ ಬರುವವರೆಗೂ ಜಾತಿ ಗಣತಿ ಬಗ್ಗೆ ಮಾತನಾಡದಂತೆ ಡಿಕೆಶಿ ಸೂಚನೆ
- ಜಾತಿ ಗಣತಿ ಬಗ್ಗೆ ಪಕ್ಷದಲ್ಲೇ ಪರ-ವಿರೋಧ ನಿಲುವು
- ವರದಿ ಕೈಬಿಡುವಂತೆ ವೀರಶೈವ ಮಹಾಸಭೆ ಆಗ್ರಹ
- ಮಹಾಸಭೆಗೆ ಶಾಮನೂರು, ಖಂಡ್ರೆ ಮುಂದಾಳುಗಳು
ಬೆಂಗಳೂರು (ಸೆ. 11): ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಡೆಸಲಾಗಿದ್ದ ಜಾತಿ ಗಣತಿ ಜಾರಿಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸುತ್ತಿರುವುದರ ನಡುವೆ ಕಾಂಗ್ರೆಸ್ ಪಾಳೆಯದಲ್ಲೇ ಈ ವರದಿ ಬಿಡುಗಡೆ, ಜಾರಿಗೆ ಪರೋಕ್ಷವಾಗಿ ವಿರೋಧ ಕಂಡುಬಂದಿದೆ. ಮಾಜಿ ಸಿಎಂ ವೀರಪ್ಪ ಮೋಯ್ಲಿ ನೇತೃತ್ವದಲ್ಲಿ ಡಿಕೆಶಿ ಸಮಿತಿಯೊಂದನ್ನು ರಚಿಸಿದ್ದಾರೆ. ಸಮಿತಿ ವರದಿ ನೀಡುವವರೆಗೂ ಮಾತನಾಡದಂತೆ ಡಿಕೆಶಿ ಸೂಚನೆ ನೀಡಿದ್ದಾರೆ.
ಕಲಬುರಗಿ ಪಾಲಿಕೆ: ಬಿಜೆಪಿ ಜೊತೆ ಗುರುತಿಸಿಕೊಳ್ಳದಂತೆ ಜೆಡಿಎಸ್ ಎಚ್ಚರಿಕೆ ಹೆಜ್ಜೆ