Asianet Suvarna News Asianet Suvarna News

ಗೌರಿ ಗಣೇಶದಂದು ಮಂಗಳಮುಖಿಯರಿಗೆ ಬಾಗಿನ ಕೊಟ್ಟ ಕೇಂದ್ರ ಸಚಿವ..!

- ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಾಗಿನ ಕೊಡುವುದು ವಾಡಿಕೆ

- ಮಂಗಳಮುಖಿಯರ ಪಾಲಿಗೆ ತವರು ಮನೆಯಾದ ಆದ ಬಿಜೆಪಿ‌ ಕಚೇರಿ

- ಪ್ರತ್ಯೇಕ ವೇದಿಕೆ ಕಲ್ಪಿಸಿ ಮಂಗಳಮುಖಿಯರಿಗೆ ಬಾಗಿನ ಕೊಟ್ಟ ಸಂಸದ

ಚಿತ್ರದುರ್ಗ (ಸೆ. 11):  ಹಿಂದೂ ಸಂಪ್ರದಾಯದ ಪ್ರಕಾರ ಸಹೋದರರು ತಮ್ಮ ಸಹೋದರಿಯರಿಗೆ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಾಗೀನ ಕೊಡುವುದು ವಾಡಿಕೆಯಾಗಿದೆ. ಇಡೀ ಸಮಾಜವೇ ಒಂದು ಸಮುದಾಯವನ್ನು ಒಂದ್ಕಡೆ ಇಟ್ಟು ನೋಡುವ ಜನರ ನಡುವೆ, ಅವರಿಗಾಗಿಯೇ ಪ್ರತ್ಯೇಕ ವೇದಿಕೆ ಕಲ್ಪಿಸಿ ಅವರಿಗೆ ಬಾಗೀನ ಕೊಡುವ ಮೂಲಕ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಎಲ್ಲರಿಗೂ ಮಾದರಿಯಾಗಿದ್ದಾರೆ. 

ಗಣೇಶನಿಗೆ ಮೊದಲ ಪೂಜೆ.. ಸಿದ್ಧಿವಿನಾಯಕನಿಗೆ ಅಗ್ರಸ್ಥಾನವೇಕೆ?

 ಚಿತ್ರದುರ್ಗ ಬಿಜೆಪಿ‌ ಕಚೇರಿ ಆವರಣ ಮಂಗಳಮುಖಿಯರ ಪಾಲಿಗೆ ತವರಿನ ಸಿರಿಯಾಗಿತ್ತು. ಇನ್ನು ಈ ವೇಳೆ ಬಾಗಿನ ಪಡೆದ ಮಂಗಳಮುಖಿಯೊಬ್ರು  ಈ ಬಾರಿಯ ಗೌರಿಗಣೇಶಹಬ್ಬ ನಮ್ಮ ಪಾಲಿಗೆ ಜೀವನದಲ್ಲಿ ಮರೆಯಲಾಗದ ದಿನವಾಗಿದೆ. ಆದ್ರೆ ಈ ಬಾಗಿನ ಸಮರ್ಪಣೆ ಕೇವಲ ಪ್ರಚಾರಕ್ಕೆ ಸೀಮಿತವಾಗದೇ ಮಂಗಳಮುಖಿಯರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿ ಒತ್ತಾಯಿಸಿದರು.