ಸೀಡಿ ಪ್ರಕರಣ ಪಕ್ಕಾ ಹನಿಟ್ರ್ಯಾಪ್, ಕಾಂಗ್ರೆಸ್ ಕೈವಾಡವಿದೆ: ಬಿಜೆಪಿ ಶಾಸಕ
ಕಾಂಗ್ರೆಸ್ ನಾಯಕರ ಮನೆಯಲ್ಲಿ ಸೀಡಿ ಲೇಡಿಗೆ ರಕ್ಷಣೆ ಕೊಟ್ಟ ವಿಚಾರಕ್ಕೆ ಬಿಜೆಪಿ ಶಾಸಕ ಸಿದ್ದು ಸವದಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಮಾ. 31): ಕಾಂಗ್ರೆಸ್ ನಾಯಕರ ಮನೆಯಲ್ಲಿ ಸೀಡಿ ಲೇಡಿಗೆ ರಕ್ಷಣೆ ಕೊಟ್ಟ ವಿಚಾರಕ್ಕೆ ಬಿಜೆಪಿ ಶಾಸಕ ಸಿದ್ದು ಸವದಿ ಪ್ರತಿಕ್ರಿಯಿಸಿದ್ದಾರೆ.
'ಸೀಡಿ ಪ್ರಕರಣ ಪಕ್ಕಾ ಹನಿಟ್ರ್ಯಾಪ್. ಇಷ್ಟು ದಿನ ಆಕೆಯನ್ನು ರಕ್ಷಿಸಿದ್ದು ಯಾರು.? ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಈ ಹಿಂದೆ ಕಾಂಗ್ರೆಸ್ ಯಾವ ಯಾವ ಕೇಸ್ ಹೇಗೆಲ್ಲಾ ಮುಚ್ಚಿ ಹಾಕಿದ್ದರು ಗೊತ್ತೇ ಇದೆ. ಸತ್ಯಾಸತ್ಯತೆ ಪರಿಶೀಲಿಸದೇ ಜಡ್ಜ್ಮೆಂಟ್ ಕೊಡಲು ಇವರ್ಯಾರ್ರಿ..? ಇದನ್ನೆಲ್ಲಾ ಬಿಡಬೇಕು' ಎಂದು ಶಾಸಕ ಸಿದ್ದು ಸವದಿ ಹೇಳಿದ್ದಾರೆ.