Asianet Suvarna News Asianet Suvarna News

ಕಾಟಚಾರಕ್ಕೆ ರಾಧಿಕಾ ವಿಚಾರಣೆ ಮುಗಿಸಿತಾ ಸಿಸಿಬಿ..? ಪ್ರಶ್ನೋತ್ತರಗಳು ಹಾಗಿವೆ ನೋಡಿ!

ವಂಚಕ ಯುವರಾಜ್ ಜೊತೆ ಹಣಕಾಸು ವ್ಯವಹಾರ ವಿವಾದ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ನಾಲ್ಕು ತಾಸುಗಳ ಕಾಲ ಸಿಸಿಬಿ ವಿಚಾರಣೆಗೆ ಒಳಪಟ್ಟರು. ಯುವರಾಜ್ ವಂಚನೆ ಕೃತ್ಯಗಳಿಗೆ ನಾನು ಸಹಕರಿಸಿಲ್ಲ. ಚಲನಚಿತ್ರ ನಿರ್ಮಾಣಕ್ಕಾಗಿ 75 ಲಕ್ಷ ರೂ ಮುಂಗಡ ತೆಗೆದುಕೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. 

ಬೆಂಗಳೂರು (ಜ. 09): ವಂಚಕ ಯುವರಾಜ್ ಜೊತೆ ಹಣಕಾಸು ವ್ಯವಹಾರ ವಿವಾದ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ನಾಲ್ಕು ತಾಸುಗಳ ಕಾಲ ಸಿಸಿಬಿ ವಿಚಾರಣೆಗೆ ಒಳಪಟ್ಟರು. ಯುವರಾಜ್ ವಂಚನೆ ಕೃತ್ಯಗಳಿಗೆ ನಾನು ಸಹಕರಿಸಿಲ್ಲ. ಚಲನಚಿತ್ರ ನಿರ್ಮಾಣಕ್ಕಾಗಿ 75 ಲಕ್ಷ ರೂ ಮುಂಗಡ ತೆಗೆದುಕೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.  ವಿಚಾರಣೆ ವೇಳೆ ಯುವರಾಜ್ - ರಾಧಿಕಾ ಫೋನ್ ಸಂಭಾಷಣೆ ಬಗ್ಗೆ ಸಿಸಿಬಿ ಪ್ರಶ್ನೆಯೇ ಎತ್ತಿಲ್ಲ. ಈ ಸಂಭಾಷಣೆಗೂ, ನಮ್ಮ ವಿಚಾರಣೆಗೂ ಸಂಬಂಧವಿಲ್ಲ ಎಂದು ಸಿಸಿಬಿ ಸ್ಪಷ್ಟಪಡಿಸಿದೆ. 

ಏನೋ ಮಾಡಲು ಹೋಗಿ ತಗಲಾಕ್ಕೊಂಡ ರಾಧಿಕಾ, ಮುಚ್ಚಿಟ್ಟ 'ಗುಟ್ಟು' ರಟ್ಟು ಮಾಡಿದ ಸಹೋದರ..!