Asianet Suvarna News Asianet Suvarna News

ದೆಹಲಿಗೆ ಹಾರಿದ ಯೋಗೇಶ್ವರ್: ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ತಿದ್ದಾರಾ..?

ಸಚಿವ ಸ್ಥಾನ ತಪ್ಪಿದ ಆಕಾಂಕ್ಷಿಗಳ ಅಸಮಾಧಾನ ಹೊರ ಬರುತ್ತಿದೆ. ಸಚಿವ ಸ್ಥಾನಕ್ಕಾಗಿ ಕಸರತ್ತು ಮುಂದುವರೆದಿದ್ದು, ಸಿಪಿ ಯೋಗೇಶ್ವರ್ ದೆಹಲಿಗೆ ಹಾರಿದ್ಧಾರೆ. 

ಬೆಂಗಳೂರು (ಆ. 09): ಸಚಿವ ಸ್ಥಾನ ತಪ್ಪಿದ ಆಕಾಂಕ್ಷಿಗಳ ಅಸಮಾಧಾನ ಹೊರ ಬರುತ್ತಿದೆ. ಸಚಿವ ಸ್ಥಾನಕ್ಕಾಗಿ ಕಸರತ್ತು ಮುಂದುವರೆದಿದ್ದು, ಸಿಪಿ ಯೋಗೇಶ್ವರ್ ದೆಹಲಿಗೆ ಹಾರಿದ್ಧಾರೆ. ಈ ಬಗ್ಗೆ ಮಾಧ್ಯಮಗಳಿಗೆ ಏನನ್ನೂ ಹೇಳದೇ, ವಕೀಲರನ್ನು ಭೇಟಿಯಾಗಲು ಬಂದಿದ್ದೇನೆ ಎಂದಿದ್ದಾರೆ. ಆದರೂ ಯೋಗೇಶ್ವರ್ ಭೇಟಿ ಕುತೂಹಲ ಮೂಡಿಸಿದೆ.

ಡಿಕೆ ಶಿವಕುಮಾರ್‌ಗೆ IMA ಸಂಬಂಧ ಇತ್ತಾ? ಅಹ್ಮದ್ ಖಾನ್ ಟಾಂಗ್

ಬೊಮ್ಮಾಯಿ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕಾಗಿ ಯೋಗೇಶ್ವರ್ ಕಸರತ್ತು ನಡೆಸಿದ್ದರು. ಆದರೆ ಹೈಕಮಾಂಡ್ ಈ ಬಾರಿ ಒಲವು ತೋರಿಸಿಲ್ಲ. ಹೀಗಾಗಿ ಮತ್ತೊಮ್ಮೆ ಹೈಕಮಾಂಡ್ ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.