ಮುನಿರತ್ನ ಮನೆ ಬಳಿ ಸ್ಫೋಟ: ಬೆಚ್ಚಿ ಬಿದ್ದ ಬೆಂಗಳೂರು!
ಬೆಂಗಳೂರಿನ ವಯ್ಯಾಲಿಕಾವಲ್ ಬಳಿ ನಿಗೂಢ ಸ್ಫೋಟ| ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಹತ್ತಿರ ಭಾರೀ ಸ್ಫೋಟದ ಶಬ್ಧ| ನಿಗೂಢ ಸ್ಫೋಟದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹ ಛಿದ್ರ ಛಿದ್ರ| ಶಬ್ಧದ ತೀವ್ರತೆಗೆ ಅರ್ಧ ಕಿಲೋ ಮೀಟರ್ ಸುತ್ತಲಿನ ಜನರು ಗಾಬರಿ| ನಿಗೂಢ ಸ್ಫೋಟಕ್ಕೆ ಕಾರಣ ಗೊತ್ತಾಗಿಲ್ಲ, ಸ್ಥಳಕ್ಕೆ ಪೊಲೀಸರು ದೌಡು|
ಬೆಂಗಳೂರು(ಮೇ.19): ಕಾಂಗ್ರೆಸ್ ಶಾಸಕ ಮುನಿರತ್ಮ ಅವರ ಮನೆಯ ಬಳಿ ಸ್ಫೋಟ ಸಂಭವಿಸಿದ್ದು, ಮುನಿರತ್ನ ಮನೆಯಲ್ಲಿ ಕೆಸ ಮಾಡುತ್ತಿದ್ದ ವೆಂಕಟೇಶ್ ಎಂಬುವವರು ಹತರಾಗಿದ್ದಾರೆ. ಮುನಿರತ್ಮ ಮನೆ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ನಿಗೂಢ ಸ್ಫೋಟ ಸಂಭವಿಸಿದ್ದು, ಶಬ್ಧದ ತೀವ್ರತೆಗೆ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳ ದೌಡಾಯಿಸಿದ್ದು, ಇಡೀ ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ. ನಗರದ ವಯ್ಯಾಲಿಕಾವಲ್ನ 11ನೇ ಬಿ ಕ್ರಾಸ್ ಬಳಿ ಇರುವ ಮುನಿರತ್ನ ನಿವಾಸದ ಮುಂದೆ ಸ್ಫೋಟ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..