ವಲಸೆ ಕಾರ್ಮಿಕರಿಗೆ ಆಸರೆಯಾದ DCP ಶಶಿಕುಮಾರ್
ತಮ್ಮ ತಮ್ಮ ಊರುಗಳಿಗೆ ತೆರಳಲು ಕೂಲಿ ಕಾರ್ಮಿಕರು ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಮೆಜೆಸ್ಟಿಕ್ಗೆ ಬಂದಿದ್ದರು. ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಿಎಂಟಿಸಿ ಫ್ಲಾಟ್ಫಾರ್ಮ್ನಲ್ಲಿ ಮಲಗಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಡಿಸಿಪಿ ಶಶಿಕುಮಾರ್ ಅವರ ಕೆಲಸಕ್ಕೆ ಖಾಕಿ ಪಡೆ ಸಾಥ್ ನೀಡಿದೆ.
ಬೆಂಗಳೂರು(ಮೇ.04): ರಾತ್ರಿ ಮೆಜೆಸ್ಟಿಕ್ನಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರಿಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿ ಕುಮಾರ್ ಆಸರೆಯಾಗಿದ್ದಾರೆ. ಕಾರ್ಮಿಕರಿಗೆ ಹಾಗೂ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ನೀರು ಹಾಗೂ ಜ್ಯೂಸ್ ಬಾಟಲ್ ನೀಡಿ ನೆರವಾಗಿದ್ದಾರೆ.
ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಿಎಂಟಿಸಿ ಫ್ಲಾಟ್ಫಾರ್ಮ್ನಲ್ಲಿ ಮಲಗಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಡಿಸಿಪಿ ಶಶಿಕುಮಾರ್ ಅವರ ಕೆಲಸಕ್ಕೆ ಖಾಕಿ ಪಡೆ ಸಾಥ್ ನೀಡಿದೆ.
ಇಂದಿನಿಂದ ಬೆಂಗಳೂರಿನಲ್ಲಿ ಹೊಸ ರೂಲ್ಸ್; ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ
ಮೆಜೆಸ್ಟಿಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು ಐನೂರು ಬಸ್ಗಳು ನಿಂತಿವೆ. ಸಾಕಷ್ಟು ಜನರು ಗುಂಪು ಸೇರಿದ್ದರು. ಇವರಿಗೆ ಬಿಸ್ಕೆಟ್, ಜ್ಯೂಸ್ ವಿತರಿಸಲಾಯಿತು ಎಂದು ಶಶಿಕುಮಾರ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.