Shivamogga: ಬಜರಂಗದಳದ ಮತ್ತೊಬ್ಬ ಕಾರ್ಯಕರ್ತನ ಮೇಲೆ ಹಲ್ಲೆ, ಭಾಷೆ ಕಾರಣಾನಾ.?

ಶಿವಮೊಗ್ಗದಲ್ಲಿ (Shivamogga) ಇನ್ನೂ ತಣ್ಣಗಾಗಿಲ್ಲ ಕೋಮು ದಳ್ಳುರಿಯ ಕಾವು. ನಡುರಾತ್ರಿ ಫ್ಲೈ ಓವರ್‌ ಮೇಲೆ ಬರುತ್ತಿದ್ದವನ ಮೇಲೆ ಹಲ್ಲೆ ನಡೆದಿದೆ. ಉರ್ದುವಿನಲ್ಲಿ ಕೇಳಿದ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಭಜರಂಗದಳದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. 

First Published Apr 28, 2022, 11:21 AM IST | Last Updated Apr 28, 2022, 11:59 AM IST

ಶಿವಮೊಗ್ಗ (ಏ. 28): ಶಿವಮೊಗ್ಗದಲ್ಲಿ (Shivamogga) ಇನ್ನೂ ತಣ್ಣಗಾಗಿಲ್ಲ ಕೋಮು ದಳ್ಳುರಿಯ ಕಾವು. ನಡುರಾತ್ರಿ ಫ್ಲೈ ಓವರ್‌ ಮೇಲೆ ಬರುತ್ತಿದ್ದವನ ಮೇಲೆ ಹಲ್ಲೆ ನಡೆದಿದೆ. ಉರ್ದುವಿನಲ್ಲಿ ಕೇಳಿದ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಭಜರಂಗದಳದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ರೈಲ್ವೇ ನಿಲ್ದಾಣದ (Railway Station)  ಬಳಿಕ ಹೊನ್ನಾಳಿ ರಸ್ತೆ ಫ್ಲೈ ಓವರ್‌ ಮೇಲೆ ಘಟನೆ ನಡೆದಿದೆ. 

ಬಿಜೆಪಿ ಸೇರ್ಪಡೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ್ರಾ ಸುಮಲತಾ ಅಂಬರೀಶ್..?

ಸ್ಕೂಟಿಯಲ್ಲಿ ಬಂದ ಮೂವರು ಕಹಾ ಜಾ ರಹಾ ಹೈ ಎಂದು ಕೇಳಿದ್ದಾರೆ. ಮನೆಗೆ ಹೋಗ್ತಾ ಇದ್ದೇನೆ ಎಂದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ತಪ್ಪಿಸಿಕೊಂಡು ಹೋಗುವಾಗ ಲಾರಿ ಅಡ್ಡ ಬಂದಿತೆಂದು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. 

Video Top Stories