ಕುಸುಮ ಮನೆ ಮುಂದೆ ಅಪರಿಚಿತ ವ್ಯಕ್ತಿಯ ಧ್ಯಾನ: ಅಚ್ಚರಿ ಮೂಡಿಸಿದೆ ನಿಗೂಢ ನಡೆ
ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಮನೆ ಬಳಿ ಧ್ಯಾನ ಮಾಡುತ್ತಾ ಅಪರಿಚಿತ ವ್ಯಕ್ತಿಯೊಬ್ಬ ಕುಳಿತಿರುವುದು ಕಂಡು ಬಂದಿದೆ. ಧ್ಯಾನಕ್ಕೆ ಕುಳಿತ ವ್ಯಕ್ತಿ ಗೆ ಬಿಸಿಲು ಬೀಳದಂತೆ ಕುಸುಮ ಮನೆಯವರು ಶಾಮಿಯಾನ ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರು (ನ. 10): ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಮನೆ ಬಳಿ ಧ್ಯಾನ ಮಾಡುತ್ತಾ ಅಪರಿಚಿತ ವ್ಯಕ್ತಿಯೊಬ್ಬ ಕುಳಿತಿರುವುದು ಕಂಡು ಬಂದಿದೆ.
3 ನೇ ಪತ್ನಿ ಜೊತೆಯೂ ಭಿನ್ನಾಭಿಪ್ರಾಯ: ಬಿಟ್ಟು ಹೋಗುವ ಮಾತೆತ್ತಿದ್ದಾರೆ ಮೆಲಾನಿಯಾ!
ಧ್ಯಾನಕ್ಕೆ ಕುಳಿತ ವ್ಯಕ್ತಿ ಗೆ ಬಿಸಿಲು ಬೀಳದಂತೆ ಕುಸುಮ ಮನೆಯವರು ಶಾಮಿಯಾನ ವ್ಯವಸ್ಥೆ ಮಾಡಿದ್ದಾರೆ. ಮಾದ್ಯಮದವರು ಚಿತ್ರೀಕರಿಸುತ್ತಿದ್ದ ಹಾಗೆ ಎದ್ದು ಹೊರಡಲು ಮುಂದಾಗಿದ್ದಾನೆ. 'ನಾನು ಯಾವುದೋ ಊರಿನಿಂದ ಬಂದಿದ್ದೇನೆ. ನನಗೆ ಕೆಲಸವೂ ಇಲ್ಲ, ಯಾಕೆ ಸುಮ್ಮನೆ ತೊಂದರೆ ಕೊಡ್ತಿದ್ದೀರಿ? ನನ್ನ ಹಿಂದೆ ಯಾಕೆ ಬಿದ್ದಿದ್ದೀರಾ'? ಎಂದು ಮಾದ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾನೆ.