ಊಟ ಸಿಗದೇ ಭಿಕ್ಷುಕಿ ಸಾವು; ಪ್ರಾಣಿಗಳ ರೀತಿ ಶವವನ್ನು ಎಳೆದು ತಂದ ಆ್ಯಂಬುಲೆನ್ಸ್ ಸಿಬ್ಬಂದಿ
ಕೊರೋನಾ ಕೊಡುತ್ತಿರುವ ನೋವು ಅಷ್ಟಿಷ್ಟಲ್ಲ.ಬೆಂಗಳೂರಿನ 8 ನೇ ಮೈಲಿಯಲ್ಲಿ ಭಿಕ್ಷುಕಿಯೊಬ್ಬರು ಊಟ ಸಿಗದೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಬಂದ ಆ್ಯಂಬುಲೆನ್ಸ್ ಸಿಬ್ಬಂದಿ ಮೂರನೇ ಮಹಡಿಯಿಂದ ಪ್ರಾಣಿಯಂತೆ ಎಳೆತಂದು ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಸಿಬ್ಬಂದಿಯ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕೊರೋನಾ ಕೊಡುತ್ತಿರುವ ನೋವು ಅಷ್ಟಿಷ್ಟಲ್ಲ.ಬೆಂಗಳೂರಿನ 8 ನೇ ಮೈಲಿಯಲ್ಲಿ ಭಿಕ್ಷುಕಿಯೊಬ್ಬರು ಊಟ ಸಿಗದೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಬಂದ ಆ್ಯಂಬುಲೆನ್ಸ್ ಸಿಬ್ಬಂದಿ ಮೂರನೇ ಮಹಡಿಯಿಂದ ಪ್ರಾಣಿಯಂತೆ ಎಳೆತಂದು ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಸಿಬ್ಬಂದಿಯ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.