Asianet Suvarna News Asianet Suvarna News

ರಾಸಲೀಲೆ ಸಿಡಿ ಪ್ರಕರಣ: 'ಈ ಕೂಡಲೇ ರಮೇಶ ಜಾರಕಿಹೊಳಿಯನ್ನ ಬಂಧಿಸಿ'

ಯಡಿಯೂರಪ್ಪ ಆರೋಪಿ ರಮೇಶ ಜಾರಕಿಹೊಳಿಯನ್ನ ನಿರಪರಾಧಿ ಎಂದು ಬಿಂಬಿಸುತ್ತಿದ್ದಾರೆ. ಹೀಗೆ ಹೇಳುವ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಬೇಡಿ: ವಕೀಲ ಕೆ.ಎನ್‌. ಜಗದೀಶ್‌

ಬೆಂಗಳೂರು(ಏ.01):  ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯನ್ನ ನ್ಯಾಯಾಧೀಶರ ಎದುರು ಹಾಜರ್‌ ಪಡಿಸಿದ್ದೇವೆ. ಆದ್ದರಿಂದ ಪ್ರಕರಣದ ಆರೋಪಿ ರಮೇಶ ಜಾರಕಿಹೊಳಿ ಅವರನ್ನ ಬಂಧಿಸಬೇಕು ಎಂದು ಯುವತಿ ಪರ ವಕೀಲ ಕೆ.ಎನ್‌. ಜಗದೀಶ್‌ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆರೋಪಿ ರಮೇಶ ಜಾರಕಿಹೊಳಿಯನ್ನ ನಿರಪರಾಧಿ ಎಂದು ಬಿಂಬಿಸುತ್ತಿದ್ದಾರೆ. ಹೀಗೆ ಹೇಳುವ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಬೇಡಿ ಎಂದು ಮನವಿಯನ್ನ ಮಾಡಿದ್ದಾರೆ.

ಸೀಡಿ ಲೇಡಿ ಮೆಡಿಕಲ್ ಟೆಸ್ಟ್‌ ಸೀಕ್ರೆಟ್: ಟ್ವಿಸ್ಟ್ ಕೊಟ್ಟಿದೆ ಆ ಒಂದು ಘಟನೆ!