Asianet Suvarna News Asianet Suvarna News

ಆಕ್ಸಿಜನ್ ಕೊರತೆ: ಸರ್ಕಾರದ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ಎಚ್‌ಡಿಕೆ

ಆಕ್ಸಿಜನ್ ಸಮಸ್ಯೆ ಮುಂದುವರೆದಿದೆ. ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 

ಬೆಂಗಳೂರು (ಮೇ. 04): ಆಕ್ಸಿಜನ್ ಸಮಸ್ಯೆ ಮುಂದುವರೆದಿದೆ. ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 

ಇಂತಹ ದುರ್ಘಟನೆ ತಪ್ಪಿಸಲು ಸರ್ಕಾರಕ್ಕೆ ಅವಕಾಶವಿದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ನಡವಳಿಕೆಗಳಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಕೊರತೆ ಇದೆ ಎಂದು ಗೊತ್ತಿದ್ದರೂ, ಪರ್ಯಾಯ ವ್ಯವಸ್ಥೆ ಏನು ಮಾಡಿಕೊಂಡಿದ್ದಾರೆ.? ನಮ್ಮಲ್ಲಿ ಉತ್ಪಾದನೆಯಾಗುವ ಅಕ್ಸಿಜನ್‌ನ್ನು ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ಧಾರೆ. ಇದನ್ನು ನಿಲ್ಲಿಸಿ, ಜನರ ಜೀವ ಉಳಿಸಬೇಕಾಗಿದೆ. ನಾನು ಸಚಿವರ ಜೊತೆ ಮಾತನಾಡಿದ್ದೇನೆ' ಎಂದಿದ್ದಾರೆ. 

Video Top Stories