Asianet Suvarna News Asianet Suvarna News

ಕೊರೋನಾಗೆ ಮೂವರು ಪೌರ ಕಾರ್ಮಿಕರು ಬಲಿ..!

ಬಿಬಿಎಂಪಿಗೆ ಮತ್ತೆಷ್ಟು ಬಲಿ ಬೇಕು ಎನ್ನುವ ಪ್ರಶ್ನೆ ಶುರುವಾಗಿದೆ. ನಾಗೇನಹಳ್ಳಿ ವಾರ್ಡ್‌ನ 28 ವರ್ಷದ ಮಹಿಳೆ ಶಿಲ್ಪಾ ಕೊರೋನಾಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ಅಲೆದು ಅಲೆದು ಕೊರೋನಾ ವಾರಿಯರ್ ಪ್ರಾಣ ಬಿಟ್ಟಿದ್ದಾರೆ.

ಬೆಂಗಳೂರು(ಜು.16): ನಮ್ಮೆಲ್ಲರ ರಕ್ಷಣೆಗೋಸ್ಕರ ಕೊರೋನಾ ವಿರುದ್ಧ ಮುಂಚೂಣಿ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್‌ಗಳಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕೊರೋನಾ ಮೂವರು ಪೌರ ಕಾರ್ಮಿಕರನ್ನು ಬಲಿ ಪಡೆದಿದೆ.

ಬಿಬಿಎಂಪಿಗೆ ಮತ್ತೆಷ್ಟು ಬಲಿ ಬೇಕು ಎನ್ನುವ ಪ್ರಶ್ನೆ ಶುರುವಾಗಿದೆ. ನಾಗೇನಹಳ್ಳಿ ವಾರ್ಡ್‌ನ 28 ವರ್ಷದ ಮಹಿಳೆ ಶಿಲ್ಪಾ ಕೊರೋನಾಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ಅಲೆದು ಅಲೆದು ಕೊರೋನಾ ವಾರಿಯರ್ ಪ್ರಾಣ ಬಿಟ್ಟಿದ್ದಾರೆ.

BBMP ಕಮಿಷನರ್ ತಲೆದಂಡಕ್ಕೆ ಒತ್ತಡ..!

ಇನ್ನು ದೀಪಾಂಜಲಿ ನಗರದ ಕೊರೋನಾ ವಾರಿಯರ್ ಕೂಡಾ ಕೊನೆಯುಸಿರೆಳೆದಿದ್ದಾರೆ. ಕೇವಲ ಮೂರು ಗಂಟೆ ಅಂತರದಲ್ಲಿ ಇಬ್ಬರು ಪೌರ ಕಾರ್ಮಿಕರನ್ನು ಕೊರೋನಾ ಬಲಿ ಪಡೆದಿದೆ. ತಮ್ಮವರ ಜೀವಗಳನ್ನೇ ಬಿಬಿಎಂಪಿಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ ಉಳಿದವರ ಪಾಡೇನು? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories