Asianet Suvarna News Asianet Suvarna News

ವಿಶ್ವಕಪ್ ಸೋಲಿನಿಂದ ರವಿಶಾಸ್ತ್ರಿ ಯುಗಾಂತ್ಯ..?

ನಾಯಕ ವಿರಾಟ್ ಕೊಹ್ಲಿ ಕೃಪಾಕಟಾಕ್ಷದಿಂದ ಕೋಚ್ ಹುದ್ದೆ ಅಲಂಕರಿಸಿದ್ದ ರವಿಶಾಸ್ತ್ರಿ ಹುದ್ದೆ ಇದೀಗ ಅಲುಗಾಡುತ್ತಿದೆ. ವಿಶ್ವಕಪ್ ಸೆಮಿಫೈನಲ್’ನಲ್ಲೇ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾಗೆ ಬಿಸಿಸಿಐ ಮೇಜರ್ ಸರ್ಜರಿಗೆ ಕೈಹಾಕಿದ್ದು, ಇದರ ಭಾಗವಾಗಿ ಕೋಚ್ ರವಿಶಾಸ್ತ್ರಿ ತಲೆದಂಡವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಬಳಿಕ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ತಲೆದಂಡವಾಗಿತ್ತು. ಇದೀಗ ವಿಶ್ವಕಪ್ ಸೋಲಿನ ಬಳಿಕ ರವಿಶಾಸ್ತ್ರಿ ಯುಗಾಂತ್ಯವಾಗುವ ಸಾಧ್ಯತೆಯಿದೆ. 

ನಾಯಕ ವಿರಾಟ್ ಕೊಹ್ಲಿ ಕೃಪಾಕಟಾಕ್ಷದಿಂದ ಕೋಚ್ ಹುದ್ದೆ ಅಲಂಕರಿಸಿದ್ದ ರವಿಶಾಸ್ತ್ರಿ ಹುದ್ದೆ ಇದೀಗ ಅಲುಗಾಡುತ್ತಿದೆ. ವಿಶ್ವಕಪ್ ಸೆಮಿಫೈನಲ್’ನಲ್ಲೇ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾಗೆ ಬಿಸಿಸಿಐ ಮೇಜರ್ ಸರ್ಜರಿಗೆ ಕೈಹಾಕಿದ್ದು, ಇದರ ಭಾಗವಾಗಿ ಕೋಚ್ ರವಿಶಾಸ್ತ್ರಿ ತಲೆದಂಡವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಬಳಿಕ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ತಲೆದಂಡವಾಗಿತ್ತು. ಇದೀಗ ವಿಶ್ವಕಪ್ ಸೋಲಿನ ಬಳಿಕ ರವಿಶಾಸ್ತ್ರಿ ಯುಗಾಂತ್ಯವಾಗುವ ಸಾಧ್ಯತೆಯಿದೆ.