Asianet Suvarna News Asianet Suvarna News

ರಾಮಾಚಾರಿ ಹಾಡಿಗೆ ವೇದಿಕೆಯಲ್ಲಿ ಸಖತ್‌ ಹೆಜ್ಜೆ ಹಾಕಿದ ರವಿಚಂದ್ರನ್-ಮಾಲಾಶ್ರೀ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕಿಯರಿಗೆ ಮತ್ತು ಬಿಬಿಎಂಪಿ ಸಿಬ್ಬಂದಿಗಳಿಗೆ ದಿಟ್ಟ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಿದ್ರು. 
 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕಿಯರಿಗೆ ಮತ್ತು ಬಿಬಿಎಂಪಿ ಸಿಬ್ಬಂದಿಗಳಿಗೆ ದಿಟ್ಟ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಿದ್ರು. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ನಟಿ ಮಾಲಾಶ್ರೀ ಭಾಗಿಯಾಗಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ರು. 

ಇದೇ ವೇಳೆ ಹಿರಿಯ ಚಿತ್ರನಟಿ ವಿನಯಪ್ರಸಾದ್, ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ, ಸಿದ್ದಾರೆಡ್ಡಿ, ಎಸಿಪಿ ಎಂ.ಸಿ.ಕವಿತಾ, ನಟಿ ಶೀತಲ್ ಶೆಟ್ಟಿ, ವಕೀಲೆ ಶ್ರೀದೇವಿ ಪಾಟೀಲ್, ನಿರೂಪಕಿಯರಾದ ಶುಭಶ್ರೀ ಜೈನ್, ಸುವರ್ಣನ್ಯೂಸ್ ಆ್ಯಂಕರ್ ಪ್ರತಿಮಾ ಭಟ್, ಪ್ರತಿಭಾ ಪ್ರಕಾರ್ ಸೇರಿದಂತೆ ಸಾಧನೆ ಮಾಡಿದ ಮಹಿಳೆಯರಿಗೆ  ದಿಟ್ಟ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ರವಿಚಂದ್ರನ್ ಮಾತನಾಡಿ  ಹೆಣ್ಣು ಸ್ಫೂರ್ತಿ ಅವಳು ಇಲ್ಲದೇ ಹೋದರೆ ಜೀವನ ವ್ಯರ್ಥ. ಹೆಣ್ಣು ಇಲ್ಲವೆಂದರೆ ಸಮಾಜದಲ್ಲಿ ಏನೂ ಇಲ್ಲ ಎಂದು ತಿಳಿಸಿದ್ರು. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಿ.ಎಸ್.ಷಡಕ್ಷರಿ, ಬಿಬಿಎಂಪಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗೀಲ್, , ಸೂರಳ್ಳರ್ ಎಕಾಶ್ ಕಿಶೋರ್, ಡಾ.ಹರೀಶ್ ಹಾಗೂ ಡಾ. ಮಂಜುನಾಥ್ ಸ್ವಾಮಿ ಮತ್ತಿತರರು ಭಾಗಿಯಾಗಿದ್ರು.