Asianet Suvarna News Asianet Suvarna News

ಶಿವರಾತ್ರಿ ಜಾಗರಣೆ ಬದಲು ಕ್ರಿಕೆಟ್‌ ಆಡಿದವರಿಗೆ 'ಸಲಗ' ಟೀಂ ಕೊಡ್ತು 1 ಲಕ್ಷ ಬಹುಮಾನ!

ಶಿವರಾತ್ರಿ ಪ್ರಯುಕ್ತ 'ಸಲಗ' ನಿರ್ದೇಶಕ ದುನಿಯಾ ವಿಜಯ್‌ ಫೆಬ್ರವರಿ 21ರ ರಾತ್ರಿ 6.30ಕ್ಕೆ ಬಸವನಗುಡಿ ನ್ಯಾಷನಲ್‌ ಗ್ರೌಂಡ್‌ನಲ್ಲಿ ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಿದ್ದರು. 

ಶಿವರಾತ್ರಿ ಪ್ರಯುಕ್ತ 'ಸಲಗ' ನಿರ್ದೇಶಕ ದುನಿಯಾ ವಿಜಯ್‌ ಫೆಬ್ರವರಿ 21ರ ರಾತ್ರಿ 6.30ಕ್ಕೆ ಬಸವನಗುಡಿ ನ್ಯಾಷನಲ್‌ ಗ್ರೌಂಡ್‌ನಲ್ಲಿ ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಿದ್ದರು. ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೋರ್ನಮೆಂಟ್‌ನಲ್ಲಿ 10 ಓವರ್‌ಗಳಿದ್ದು ಬೆಳಗ್ಗೆ 4 ಗಂಟೆವರೆಗೂ ಪಂದ್ಯ ನಡೆದಿದೆ. ಪಂದ್ಯ ಗೆದ್ದವರಿಗೆ 1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದೂ ಘೋಷಿಸಿದ್ದರು. ದುನಿಯ ವಿಜಯ್ ಹಾಗೂ ಡಾಲಿ ಧನಂಜಯ್ ಒಂದು ಓವರ್ ಆಡುವ ಮೂಲಕ ಚಾಲನೆ ನೀಡಿದರು.

ಸ್ಯಾಂಡಲ್‌ವುಡ್ 'ಸಲಗ' ಜೊತೆ ಮೇಕಿಂಗ್ ವಿಡಿಯೋ ಬಗ್ಗೆ ಮಾತುಕತೆ!

ಕೆಂಪೇಗೌಡ ನಗರದ UCC team united cricket clive ಪಂದ್ಯ ಗೆದ್ದಿದ್ದು, 1 ಲಕ್ಷ ರೂ. ಬಹುಮಾನ ಪಡೆದುಕೊಂಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories