Asianet Suvarna News Asianet Suvarna News

'ಬನಾರಸ್' ಕಥೆ ಬರೆಯೋ ಮುನ್ನ ರವಿಚಂದ್ರನ್ ಸಿನಿಮಾದ ಸಾಲು ನೆನಪಾಯ್ತು; ನಿರ್ದೇಶಕ ಜಯತೀರ್ಥ

ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾದ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ಜಯತೀರ್ಥ ಈ ಕಥೆ ಬರೆಯುವ ಮುನ್ನ ರವಿಚಂದ್ರನ್ ಸಿನಿಮಾದ ಒಂದು ಸಾಲು ನೆನಪಾಯಿತು ಎಂದು ಹೇಳಿದರು. 

ಸ್ಯಾಂಡಲ್ ವುಡ್‌ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಬನಾರಸ್ ಸಿನಿಮಾ ಕೂಡ ಒಂದು. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಇತ್ತೀಚಿಗಷ್ಟೆ ಬನಾಸರ್ ತಂಡ ಟ್ರೈಲರ್ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಅದ್ದೂರಿಯಾಗಿ ನಡೆದ ಈವೆಂಟ್ ನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಭಾಗಿಯಾಗಿದ್ದರು. ಈವೆಂಟ್ ನಲ್ಲಿ ಮಾತನಾಡಿದ ನಿರ್ದೇಶಕ ಜಯತೀರ್ಥ, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದ ಜಯತೀರ್ಥ ಕನ್ನಡದ ನಿಜವಾದ ಶೃಂಗಾರರಾಜ ರವಿಚಂದ್ರನ್ ಎಂದು ಹಾಡಿಹೊಗಳಿದರು. ಪ್ರೇಮ ಕಥೆ ಬರೆಯುವಾಗ ರವಿ ಸರ್ ನೆನಪಾಗುತ್ತಾರೆ. ಪ್ಯಾನ್ ಇಂಡಿಯಾ ಯಾವತ್ತೋ ಮಾಡಿದ್ದಾರೆ.ಈ ಕಥೆ ಬರೆಯಲು ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾ ಮೊದಲು ನೆನಪಿಗೆ ಬಂದಿತ್ತು ಎಂದು ಹೇಳಿದರು.