Asianet Suvarna News Asianet Suvarna News

ನಿರ್ಮಾಪಕರಿಗೆ, ನಿರ್ದೇಶಕರಿಗೆ ಚಿರು ಯಾವತ್ತೂ ತೊಂದರೆ ಕೊಟ್ಟಿದ್ದೇ ಇಲ್ಲ: ಸಾರಾ ಗೋವಿಂದು

ನಿರ್ದೆಶಕ ಸಾರಾ ಗೋವಿಂದು, 'ಯಾರಿಗೂ ತೊಂದರೆ ಕೊಡದೇ ಅವನ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದ. ಎಲ್ಲರ ಜೊತೆಯೂ ಒಳ್ಳೆಯ ರೀತಿಯಲ್ಲಿ ಇರುತ್ತಿದ್ದ. ಹುಟ್ಟು- ಸಾವು ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಭಗವಂತನ ಕೈಯಲ್ಲಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಆ ದೇವರು ಕೊಡಲಿ' ಎಂದು ಭಾವುಕರಾದರು. 

ಬೆಂಗಳೂರು (ಜೂ. 08): ಸ್ಯಾಂಡಲ್‌ವುಡ್ ನಟ, ನಗುಮುಖದ ಚೆಲುವ ಚಿರಂಜೀವಿ ಸರ್ಜಾ ವಿಧಿವಶರಾಗಿರುವುದು ಬಹಳ ದುಃಖದ ವಿಚಾರ. ಇನ್ನು ಕೆಲವೇ ತಿಂಗಳಲ್ಲಿ ಅಪ್ಪನಾಗಬೇಕಿದ್ದ ಚಿರು ಈ ರೀತಿ ದುರಂತ ಕಂಡಿರುವುದು ವಿಧಿಯಾಟವೇ ಸರಿ. ನಿಜಕ್ಕೂ ಈ ಸಾವನ್ನು ಯಾರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸಾವಿರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಚಿರು ಅಂತಿಮ ದರ್ಶನ ಪಡೆದು ಭಾವುಕರಾದರು.

ಕ್ರೂರಿ ವಿಧಿ; ಅಳಿಯನ ಮುಂದೆ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತ ಮಾವ ಸುಂದರ್ ರಾಜ್!

ನಿರ್ದೆಶಕ ಸಾರಾ ಗೋವಿಂದು, 'ಯಾರಿಗೂ ತೊಂದರೆ ಕೊಡದೇ ಅವನ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದ. ಎಲ್ಲರ ಜೊತೆಯೂ ಒಳ್ಳೆಯ ರೀತಿಯಲ್ಲಿ ಇರುತ್ತಿದ್ದ. ಹುಟ್ಟು- ಸಾವು ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಭಗವಂತನ ಕೈಯಲ್ಲಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಆ ದೇವರು ಕೊಡಲಿ' ಎಂದು ಭಾವುಕರಾದರು. 

Video Top Stories