'ನಮ್ಮ ಮುಂದೆ ಆಡಿ ಬೆಳೆದ ಹುಡುಗ; ಬಹಳ ದುಃಖವಾಗುತ್ತಿದೆ' : ದೊಡ್ಡಣ್ಣ
ಸ್ಯಾಂಡಲ್ವುಡ್ 'ವಾಯುಪುತ್ರ', 'ವರದನಾಯಕ' ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರ ಅಕಾಲಿಕ ಮರಣ ಇಡೀ ಕುಟುಂಬವನ್ನು ದುಃಖಸಾಗರದಲ್ಲಿ ಮುಳುಗಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಮಗುವಿನ ಮುಖ ನೋಡುವವರಿದ್ದರು. ಅದರೆ ವಿಧಿಯಾಟವೇ ಬೇರೆ. ಸ್ಯಾಂಡಲ್ವುಡ್ ಗಣ್ಯರು, ಅಭಿಮಾನಿಗಳು ಚಿರು ಅಂತಿಮ ದರ್ಶನ ಪಡೆದು ಭಾವುಕರಾದರು. ಹಿರಿಯ ನಟ ದೊಡ್ಡಣ್ಣ ಚಿರು ನೆನೆದು ಭಾವುಕರಾದರು. ' ನಮ್ಮ ಮುಂದೆ ಆಡಿ ಬೆಳೆದ ಹುಡುಗ. ವಿಧಿಯಾಕೆ ಇಷ್ಟು ಕ್ರೂರವಾಯ್ತೋ ಗೊತ್ತಿಲ್ಲ. ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ' ಎಂದು ಭಾವುಕರಾದರು.
ಬೆಂಗಳೂರು (ಜೂ. 08): ಸ್ಯಾಂಡಲ್ವುಡ್ 'ವಾಯುಪುತ್ರ', 'ವರದನಾಯಕ' ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರ ಅಕಾಲಿಕ ಮರಣ ಇಡೀ ಕುಟುಂಬವನ್ನು ದುಃಖಸಾಗರದಲ್ಲಿ ಮುಳುಗಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಮಗುವಿನ ಮುಖ ನೋಡುವವರಿದ್ದರು. ಅದರೆ ವಿಧಿಯಾಟವೇ ಬೇರೆ. ಸ್ಯಾಂಡಲ್ವುಡ್ ಗಣ್ಯರು, ಅಭಿಮಾನಿಗಳು ಚಿರು ಅಂತಿಮ ದರ್ಶನ ಪಡೆದು ಭಾವುಕರಾದರು. ಹಿರಿಯ ನಟ ದೊಡ್ಡಣ್ಣ ಚಿರು ನೆನೆದು ಭಾವುಕರಾದರು. ' ನಮ್ಮ ಮುಂದೆ ಆಡಿ ಬೆಳೆದ ಹುಡುಗ. ವಿಧಿಯಾಕೆ ಇಷ್ಟು ಕ್ರೂರವಾಯ್ತೋ ಗೊತ್ತಿಲ್ಲ. ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ' ಎಂದು ಭಾವುಕರಾದರು.
'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್ ಸರ್ಜಾ!