ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ: ಸಚಿವ ಶಂಕರ ಮುನೇನಕೊಪ್ಪ
- ಶಂಕರ ಪಾಟೀಲ ಮುನೇನಕೊಪ್ಪ ಹೆಗಲಿಗೆ ಜವಳಿ ಮತ್ತು ಸಕ್ಕರೆ ಖಾತೆ
- 'ಸರಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡುವೆ'
- 'ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುವೆ'
ಬೆಂಗಳೂರು (ಆ. 08): ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಕೆಲವು ಹಿರಿಯ ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಬಹುತೇಕರಿಗೆ ಹಿಂದಿನ ಖಾತೆಯನ್ನೇ ಕೊಡಲಾಗಿದೆ. ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಜವಳಿ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಈ ಬಗ್ಗೆ ಮುನೇನಕೊಪ್ಪ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಇಂಧನ ಖಾತೆ ಸಿಕ್ಕಿದ್ದಕ್ಕೆ ಸುನೀಲ್ ಕುಮಾರ್ ಖುಷ್, ಕೆಲಸ ಮಾಡಲು ಫುಲ್ ಜೋಷ್..!
' ಸರಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ. ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ. ಬೆಲ್ಲದ ಮತ್ತು ನಾನು ಇಬ್ಬರು ಸ್ನೇಹಿತರು, ಕೂಡಿಕೊಂಡು ಕೆಲಸ ಮಾಡುತ್ತೇವೆ' ಎಂದಿದ್ದಾರೆ.