Asianet Suvarna News Asianet Suvarna News

ಅತಂತ್ರ ಪಾಲಿಕೆ; ಜೆಡಿಎಸ್‌ ಮುಂದಿನ ಹೆಜ್ಜೆ ತಿಳಿಸಿದ ಕುಮಾರಸ್ವಾಮಿ

* ಹೊರಬಂದ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ
* ರಾಜ್ಯ ರಾಜಕೀಯದಲ್ಲಿ ಹೊಸದೊಂದು ಚರ್ಚೆ
* ಜೆಡಿಎಸ್ ಮುಂದಿನ ಹೆಜ್ಜೆ ಏನು?

ಬೆಂಗಳೂರು(ಸೆ. 06)  ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಫಲಿತಾಂಶ ಹೊರಗೆ ಬಂದಿದೆ. ಬೆಳಗಾವಿ ಬಿಜೆಪಿ ಪಾಲಾಗಿದ್ದರೆ ಕಲಬುರಗಿ ಮತ್ತು ಧಾರವಾಡ ಅತಂತ್ರವಾಗಿದೆ.  ಮೂರು ಮಹಾನಗರ ಪಾಲಿಕೆಗಳ ಫಲಿತಾಂಶದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿದೆ.

ಬೆಳಗಾವಿಯಲ್ಲಿ ಅಧಿಕಾರಕ್ಕೇರಿ ಬಿಜೆಪಿ ಇತಿಹಾಸ

ಈ ನಡುವೆ ಜೆಡಿಎಸ್ ಮುಂದೆ ಯಾವ ಹೆಜ್ಜೆ ಇಡಲಿದೆ ಎನ್ನುವುದು ಮುಖ್ಯವಾಗಿದೆ. ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರು  ಮತ್ತು ಮುಖಂಡರು ಸೇರಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

Video Top Stories