Asianet Suvarna News Asianet Suvarna News

ದೆಹಲಿಗೆ ಸಿದ್ದರಾಮಯ್ಯ 'ಹಿಂದ'ಯಾತ್ರೆ, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ‌

  • ನಾಳೆ (ಫೆ.16) ದೆಹಲಿಗೆ ಭೇಟಿ ನೀಡಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿ ಚರ್ಚಿಸಲಿರುವ ಸಿದ್ದು
  • ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದ ಸಿದ್ದರಾಮಯ್ಯ ನಡೆ  

ಬೆಂಗಳೂರು (ಫೆ.15): ರಾಜ್ಯದಲ್ಲಿ ಮೀಸಲಾತಿ ಹೋರಾಟ ಜೋರಾಗಿದೆ. ಕುರುಬ ಸಮಾವೇಶವೂ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇವುಗಳಿಂದ ದೂರವುಳಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ 'ಹಿಂದ' ಸಮಾವೇಶ ನಡೆಸುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

ಇದನ್ನೂ ನೋಡಿ: ಬಿಪಿಎಲ್‌ ಕಾರ್ಡ್‌ ವಿವಾದ: ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ ಪ್ರತಿಕ್ರಿಯೆ!...

ಇದೇ ವೇಳೆ, ನಾಳೆ (ಫೆ.16) ಸಿದ್ದರಾಮಯ್ಯ ದೆಹಲಿ ಭೇಟಿಗೆ ಹೊರಟಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಪಕ್ಷದ ವರಿಷ್ಠರನ್ನು ಭೇಟಿಯಾಗಿ 'ಹಿಂದ' ಚಳುವಳಿ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ ಎಂಬ ಗುಸು ಗುಸು ಹರಿದಾಡುತ್ತಿದೆ. ಏನಿದು ಸಿದ್ದರಾಮಯ್ಯ ಭೇಟಿಯ ರಹಸ್ಯ? ಇಲ್ಲಿದೆ ವಿವರ...

Video Top Stories