Asianet Suvarna News Asianet Suvarna News

ಸಿಟಿ ರವಿಯವರನ್ನು ಹಿಗ್ಗಾ-ಮುಗ್ಗಾ ಜಾಡಿಸಿದ ಸಿದ್ದರಾಮಯ್ಯ...!

ರಾಜ್ಯದೆಲ್ಲೆಡೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಕೂಗುಗಳು ಕೇಳಿ ಬರುತ್ತಿರುವ ನಡುವಲ್ಲೇ, ರಾಜಕೀಯ ನಾಯಕ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.
 

ಬೆಂಗಳೂರು, (ನ.21): ರಾಜ್ಯದೆಲ್ಲೆಡೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಕೂಗುಗಳು ಕೇಳಿ ಬರುತ್ತಿರುವ ನಡುವಲ್ಲೇ, ರಾಜಕೀಯ ನಾಯಕ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಸ್ಲಿಂ ಮುಖಂಡರಿಂದ ಅಭಿಯಾನ

 ಸಿ.ಟಿ. ರವಿ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ, ಇನ್ನು ಗೋಹತ್ಯೆ ನಿಷೇಧದ ಬಗ್ಗೆ ಮಾತಾಡ್ತಾರೆ. ಗೋಹತ್ಯೆ ಮಾಡಿ, ವಿದೇಶಕ್ಕೆ ರಫ್ತು ಮಾಡುತ್ತಿರುವವರು ಯಾರೆಂದು ಮೊದಲು ಹೇಳಲಿ. ಸಿ.ಟಿ. ರವಿ ಅನಗತ್ಯ ಮಾತನಾಡುವ ಬದಲು ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.