Asianet Suvarna News Asianet Suvarna News

ಕಾಂಗ್ರೆಸ್‌ ಕಚೇರಿ ಗುಸು-ಗುಸು ಹಿಂದೆ ಇರುವ ನಾಯಕನ ಗುಟ್ಟು ಹೇಳಿದ ಕಟೀಲ್!

* ಕಾಂಗ್ರೆಸ್ ಕಚೇರಿಯಲ್ಲೇ ಡಿಕೆಶಿ ವಿರುದ್ಧ ಹೇಳಿಕೆ ವಿಚಾರ
* ಕಾಂಗ್ರೆಸ್ ಪಾರ್ಟಿ ಬಣ್ಣ ಬಯಲಾಗಿದೆ ಎಂದ ಕಟೀಲ್
* ಡಿಕೆಶಿಯನ್ನು ರಾಜಕೀಯವಾಗಿ ಮುಗಿಸುವ ತಂತ್ರವೂ ಇದರ ಹಿಂದೆ ಇದೆ
*  ಇಂಥ ಆರೋಪಗಳು ಬಂದಾಗ ಸಮಗ್ರ ತನಿಖೆ ಆಗಬೇಕು

ಮಂಗಳೂರು(ಅ. 13)  ಕಾಂಗ್ರೆಸ್ (Congress) ನಾಯಕರೇ ತಮ್ಮವರೇ ವಿರುದ್ಧ ಬೃಹತ್  ಹಗರಣಗಳ ಮಾತನಾಡಿದ್ದಾರೆ. ಕಾಂಗ್ರೆಸ್ ನ ಕರ್ಮ ಕಾಂಡ ಬಯಲಿಗೆ ಬಂದಿದೆ. ಕಲೆಕ್ಷನ್ ಗಿರಾಕಿಗಳು ಅಂಥ ನಾವು  ಹೇಳಿಲ್ಲ.. ಅವರ ಪಕ್ಷದವರೇ ಹೇಳಿದ್ದಾರೆ.. ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel). 

ಮಾಧ್ಯಮಗಳು ತೋರಿಸಿದ್ದು ಸರಿ..ನಿಜವಿದೆ ಎಂದ ಡಿಕೆಶಿ

ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇಂಥ ಆರೋಪಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಉಗ್ರಪ್ಪ  ಮತ್ತು ಸಲೀಂ ಮಾತುಗಳ ಬಗ್ಗೆ ತನಿಖೆ ಆಗಬೇಕು.  ಇದರ ಹಿಂದೆ ಡಿಕೆಶಿ (DK Shivakumar) ಅವರನ್ನು ರಾಜಕೀಯವಾಗಿ ಮುಗಿಸುವ ತಂತ್ರಗಾರಿಕೆ ಇದೆ ಎಂದು ಹೇಳಿದ್ದಾರೆ. 

Video Top Stories