Karnataka Election ಬಿಜೆಪಿ ಹಿರಿಯ ಶಾಸಕರಿಗೆ ಢವಢವ, ಕಿರಿಯರಿಗೆ ಟಿಕೆಟ್ ನೀಡಲು ತಯಾರಿ!
ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆ ಮಾಡಲು ಬಿಜೆಪಿ ಮುಂದಾಗಿದೆ. ಯುವ ನಾಯಕರಿಗೆ ಟಿಕೆಟ್ ನೀಡಲು ಆರ್ಎಸ್ಎಸ್ ಸೂಚಿಸಿದೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರಲ್ಲೇ ಅಸಮಾಧಾನ ಶುರುವಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷಗಳ ತಯಾರಿ, ಕಸರತ್ತು ಜೋರಾಗಿದೆ. ಇದೀಗ ಬಿಜೆಪಿ ಹಿರಿಯ ಶಾಸಕರಿಗೆ ಆತಂಕ ಹೆಚ್ಚಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಹಿರಿಯರ ಬದಲು ಕಿರಿಯರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.ಬಿಜೆಪಿ, ಆರ್ಎಸ್ಎಸ್ ಹಾಗೂ ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ ನೆಡಸಲಾಗಿದೆ.ವಿರೋಧಿ ಅಲೆ ಇರುವ ಕಡೆ ಟಿಕೆಟ್ ಬದಲಾಯಿಸಲು ಸೂಚಿಸಲಾಗಿದೆ. ಸೈದ್ಧಾಂತಿಕ ಬದ್ಧತೆ ಇರುವ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಅನ್ನೋ ಅಭಿಪ್ರಾಯ ಬಂದಿದೆ. ಹಿಂದುತ್ವ, ಆರ್ಎಸ್ಎಸ್ ಬೇರೂರಿರುವ ಕ್ಷೇತ್ರಗಳಲ್ಲಿ ಯುವಕರಿಗೆ ಅವಕಾಶ ನೀಡಲು ಬಿಜೆಪಿ ಮುಂದಾಗಿದೆ.