Asianet Suvarna News Asianet Suvarna News

'ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳಬೇಕು'? ಎಚ್‌ಡಿಕೆಗೆ ಸಂಬರ್ಗಿ ಟಾಂಗ್!

ನಿರೂಪಕಿ ಅನುಶ್ರೀ ಪರವಾಗಿ ಮಾಜಿ ಮುಖ್ಯಮಂತ್ರಿಯೊಬ್ಬರು ಮಂಗಳೂರು ಸಿಸಿಬಿ ಮೇಲೆ ಒತ್ತಡ ಹೇರಿದ್ದಾರೆ ಅನ್ನುವ ಸುದ್ದಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. 

ಬೆಂಗಳೂರು (ಅ. 03): ನಿರೂಪಕಿ ಅನುಶ್ರೀ ಪರವಾಗಿ ಮಾಜಿ ಮುಖ್ಯಮಂತ್ರಿಯೊಬ್ಬರು ಮಂಗಳೂರು ಸಿಸಿಬಿ ಮೇಲೆ ಒತ್ತಡ ಹೇರಿದ್ದಾರೆ ಅನ್ನುವ ಸುದ್ದಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. 

ಡ್ರಗ್ ಕೇಸ್ : ಅನುಶ್ರೀ - ಮಾಜಿ ಸಿಎಂ ಕಾಲ್ ರಹಸ್ಯ, ಕುಮಾರಣ್ಣಗೆ ಸಿಟ್ಯಾಕೆ? ಸಿಡುಕ್ಯಾಕೆ?

ಆ ಮಾಜಿ ಸಿಎಂ ಯಾರು ಎಂದು ಮಾಧ್ಯಮದವರು ಹೇಳಲಿ. ಕರ್ನಾಟಕದಲ್ಲಿ 6 ಮಂದಿ ಮಾಜಿ ಸಿಎಂಗಳಿದ್ದಾರೆ. ಅವರಲ್ಲಿ ಯಾರು ಎಂದು ಸ್ಪಷ್ಟಪಡಿಸಲಿ ಎಂದಿದ್ದಾರೆ. ಎಚ್‌ಡಿಕೆ ಹೇಳಿಕೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯದಲ್ಲಿ ಅನೇಕ ಮಾಜಿ ಸಿಎಂಗಳಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳಬೇಕು? ಎಲ್ಲಿಯೂ ನಾವು ಎಚ್‌ಡಿಕೆ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಸಂಬರಗಿ ಹೇಳಿದ್ದಾರೆ. 

Video Top Stories