Asianet Suvarna News Asianet Suvarna News

ಶುರುವಾಯ್ತು ಸಚಿವರ ಹೊಸ ಬೇಡಿಕೆ: ಇಕ್ಕಟ್ಟಿನಲ್ಲಿ ಸಿಎಂ ಯಡಿಯೂರಪ್ಪ..!

* ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಆನಂದ್ ಸಿಂಗ್‌, ಎಂಟಿಬಿ ನಾಗರಾಜ್‌ 
* ಕೇಳಿದ ಜಿಲ್ಲೆಗೆ ಉಸ್ತುವಾರಿ ಕೊಟ್ಟರೂ ಎಂಟಿಬಿಗೆ ಬೇರೆ ಖಾತೆ ಬೇಕಂತೆ 
* ವಿಜಯನಗರ ಜಿಲ್ಲೆಯಾದ್ರೆ ಸಾಕು ಅಂತಿದ್ದ ಆನಂದ್‌ ಸಿಂಗ್‌ರಿಂದ ಖಾತೆ ಕ್ಯಾತೆ
 

ಬೆಂಗಳೂರು(ಜೂ.25): ಸಿಎಂ ಬಿ.ಎಸ್‌. ಯಡಿಯೂರಪ್ಪ ಕ್ಯಾಬಿನೆಟ್‌ನಲ್ಲಿ ಖಾತೆ ಕ್ಯಾತೆ ಮುಂದುವರೆದಿದೆ. ಸಚಿವರಾದ ಆನಂದ್ ಸಿಂಗ್‌, ಎಂಟಿಬಿ ನಾಗರಾಜ್‌ ಅವರು ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜ್‌ಗೆ ಕೇಳಿದ ಜಿಲ್ಲೆಗೆ ಉಸ್ತುವಾರಿ ಕೊಟ್ಟರೂ ಬೇರೆ ಖಾತೆ ಬೇಕಂತೆ ಅಂತ ತಿಳಿದು ಬಂದಿದೆ. ಉಸ್ತುವಾರಿ ಆಯ್ತು ಖಾತೆ ಬದಲಾವಣೆಗಾಗಿ ಎಂಟಿಬಿ ಪಟ್ಟು ಹಿಡಿದಿದ್ದಾರೆ. ಈ ಮೊದಲು ವಿಜಯನಗರ ಜಿಲ್ಲೆಯಾದ್ರೆ ಸಾಕು ಅಂತಿದ್ದ ಆನಂದ್‌ ಸಿಂಗ್‌ ಇದೀಗ ಖಾತೆ ಕ್ಯಾತೆಯನ್ನ ಆರಂಭಿಸಿದ್ದಾರೆ. 

ಮೈಶುಗರ್ ಖಾಸಗೀಕರಣಕ್ಕೆ ಅಸ್ತು ಎಂದ ಸರ್ಕಾರ

Video Top Stories