ದಳಪತಿ ಅದೃಷ್ಟದ ಮನೆಯನ್ನು ಸಿದ್ದರಾಮಯ್ಯಗೆ ಕೊಡ್ತಾರಂತೆ ಜಮೀರ್.?
ಮಾಜಿ ಸಿಎಂ ಎಚ್ಡಿಕೆ ಜೊತೆಗಿನ ಜಿದ್ದಿಗಾಗಿ, ಸದಾಶಿವ ನಗರದಲ್ಲಿರುವ ತಮ್ಮ ಗೆಸ್ಟ್ ಹೌಸನ್ನು ಜಮೀರ್ ಅಹ್ಮದ್ ಸಿದ್ದರಾಮಯ್ಯಗೆ ಕೊಡುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಅ. 12): ಮಾಜಿ ಸಿಎಂ ಎಚ್ಡಿಕೆ (HD Kumaraswamy) ಜೊತೆಗಿನ ಜಿದ್ದಿಗಾಗಿ, ಸದಾಶಿವ ನಗರದಲ್ಲಿರುವ ತಮ್ಮ ಗೆಸ್ಟ್ ಹೌಸನ್ನು ಜಮೀರ್ ಅಹ್ಮದ್ (Zameer Ahmad) ಸಿದ್ದರಾಮಯ್ಯಗೆ (Siddaramaiah) ಕೊಡುತ್ತಿದ್ದಾರೆ ಎನ್ನಲಾಗಿದೆ.
ಅಪಾರ್ಟ್ಮೆಂಟ್ ಮೆಂಟೇನೆನ್ಸ್ ಚಾರ್ಜ್ ಪಾವತಿಸದ ಜಮೀರ್ ಅಹಮದ್
ಎಚ್ಡಿಕೆ ಯಿಂದ ಪಡೆದ ಗೆಸ್ಟ್ ಹೌಸನ್ನು ವಾಸ್ತು ಪ್ರಕಾರ ನವೀಕರಣ ಮಾಡಿಸಲಾಗುತ್ತಿದ್ದು, ಸಿದ್ದರಾಮಯ್ಯಗೆ ಬಿಟ್ಟು ಕೊಡಲಿದ್ದಾರೆ ಎನ್ನಲಾಗಿದೆ. ಎಚ್ಡಿಕೆ ಮೊದಲು ಸಿಎಂ ಆಗಿದ್ದಾಗ ಇದ್ದಿದ್ದು ಇದೇ ಮನೆಯಲ್ಲಿ. ಇದು ಅದೃಷ್ಟದ ಮನೆ ಎಂಬ ನಂಬಿಕೆ ಜಮೀರ್ದು. ಹಾಗಾಗಿ ಇದನ್ನು ಸಿದ್ದರಾಮಯ್ಯಗೆ ಕೊಟ್ಟು, ಅವರು ಮತ್ತೆ ಸಿಎಂ ಆಗಬೇಕೆಂಬುದು ಜಮೀರ್ ಲೆಕ್ಕಾಚಾರ!