ರಾರಾ ಜನತೆ ಜಾತಿ ನೋಡಿ ಓಟು ಹಾಕಲ್ಲ, ಅಭಿವೃದ್ಧಿ ನೋಡಿ ವೋಟು ಹಾಕ್ತಾರೆ'
ಆರ್ಆರ್ ನಗರ ಚುನಾವಣೆ ಕ್ಲೈಮಾಕ್ಸ್ ಹಂತದಲ್ಲಿದೆ. ಬಿಜೆಪಿ - ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಮಾತ್ರ ಬಹಳ ಜೋರಾಗಿದೆ. ಆರ್ಆರ್ ನಗರದಲ್ಲಿ ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿರುವುದರಿಂದ ಜಾತಿ ರಾಜಕಾರಣದ ಬಗ್ಗೆ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿದ್ದಾರೆ.
ಬೆಂಗಳೂರು (ಅ. 31): ಆರ್ಆರ್ ನಗರ ಚುನಾವಣೆ ಕ್ಲೈಮಾಕ್ಸ್ ಹಂತದಲ್ಲಿದೆ. ಬಿಜೆಪಿ - ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಮಾತ್ರ ಬಹಳ ಜೋರಾಗಿದೆ. ಆರ್ಆರ್ ನಗರದಲ್ಲಿ ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿರುವುದರಿಂದ ಜಾತಿ ರಾಜಕಾರಣದ ಬಗ್ಗೆ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿದ್ದಾರೆ.
ಕಾಂಗ್ರೆಸ್ಗೆ ಒಕ್ಕಲಿಗರು ವೋಟ್ ಹಾಕುವ ಪ್ರಶ್ನೆಯೇ ಇಲ್ಲ: ಅಶ್ವಥ್ ನಾರಾಯಣ್
'ಮತದಾರರು ಜಾತಿ ನೋಡಿ ಮತ ಹಾಕುವುದಿಲ್ಲ. ಅಭಿವೃದ್ಧಿಯನ್ನು ನೋಡಿ ಮತ ಹಾಕುತ್ತಾರೆ. ಜಾತಿ ನೋಡುವುದಾದರೆ ಈ ಹಿಂದೆ ಮುನಿರತ್ನ ಸೋಲಬೇಕಾಗಿತ್ತು. ಮಂಡ್ಯದಲ್ಲಿ ಏನಾಯ್ತು? ಜಾತಿಯನ್ನು ನೋಡದೇ ಸುಮಲತಾರನ್ನು ಗೆಲ್ಲಿಸಿದ್ರು. ರಾರಾದಲ್ಲಿಯೂ ಜಾತಿ ನೋಡದೇ ಮುನಿರತ್ನ ಅಭಿವೃದ್ಧಿ ಕೆಲಸವನ್ನು ನೋಡಿ ವೋಟ್ ಹಾಕುತ್ತಾರೆ' ಎಂದು ಪಾಟೀಲರು ಹೇಳಿದ್ದಾರೆ.