Asianet Suvarna News Asianet Suvarna News

ಶಿಕ್ಷಣದಲ್ಲಿ ಕೇಸರೀಕರಣ ಆರೋಪ: ಸಚಿವ ಬಿ.ಸಿ ನಾಗೇಶ್ ಹೇಳಿದ್ದೇನು?

ಶಿಕ್ಷಣದಲ್ಲಿ ಕೇಸರೀಕರಣ ಆರೋಪ ಸೇರಿ ವಿವಿಧ ಪ್ರಶ್ನೆಗಳಿಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರಿಸಿದ್ದಾರೆ.

ಸುವರ್ಣ ನ್ಯೂಸ್'ನ 'ನ್ಯೂಸ್ ಅವರ್ ವಿತ್ ಬಿ.ಸಿ ನಾಗೇಶ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ವಿವೇಕಾನಂದ ಹೆಸರಿನಲ್ಲಿ 8 ಸಾವಿರಕ್ಕೂ ಹೆಚ್ಚು ಕ್ಲಾಸ್‌ ರೂಮ್‌ಗಳನ್ನು 992 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತೆ. ಎಲ್ಲರೂ ಸ್ವಾಗತಿಸಬೇಕಾದ ಯೋಜನೆ ಇದು ಎಂದು ಬಿ.ಸಿ ನಾಗೇಶ್ ಹೇಳಿದರು. ಆದ್ರೆ ಆ ಕ್ಲಾಸ್‌ ರೂಮ್‌'ಗೆ ಕೇಸರಿ ಬಣ್ಣ ಬಳಿಯಬಹುದು ಎನ್ನುವ ಕಾಂಗ್ರೆಸ್‌ನವರ, ಅದರಲ್ಲೂ ಸಿದ್ದರಾಮ್ಯನವರ ವಿರೋಧದಲ್ಲಿ ವಿಷಯಕ್ಕೆ ಚರ್ಚೆ ಶುರುವಾಯ್ತು.  ಶಾಲೆಗಳ ವಿಷಯ ಈ ರೀತಿ ಚರ್ಚೆಗೆ ಬರುತ್ತಿರುವು ಮೊದಲ ಸಲವಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳು ಚರ್ಚೆ ಬರುತ್ತಲೇ ಇದೆ. ಈ ಎಲ್ಲಾ ವಿಷಯಗಳಿಗೆ ಸೂಕ್ತ ಉತ್ತರವನ್ನು  ಸಚಿವ  ಬಿ.ಸಿ ನಾಗೇಶ್ ಕೊಟ್ಟಿದ್ದಾರೆ. ಈ ವಿಷಯದ ಕುರಿತು ಕೆಲವು ಮಾಹಿತಿಯನ್ನು ಪಡೆಯಲು ಈ ವಿಡಿಯೋವನ್ನು ನೋಡಿ.

ಸಿದ್ದರಾಮಯ್ಯ ಬರ್ತಾರಂದ್ರೆ ಜನತೆ ಭಯ ಪಡ್ತಾರೆ: ಬಿಜೆಪಿ ನಾಯಕ ನಾಗರಾಜ

Video Top Stories