Asianet Suvarna News Asianet Suvarna News

AICC ಬೆನ್ನಲ್ಲೇ ಕೆಪಿಸಿಸಿಯಲ್ಲೂ ಅಸಮಾಧಾನ: ನಾಯಕರುಗಳಿಗೆ ಎಚ್ಚರಿಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಇಂದಿರಾಗಾಂಧಿ ಜನ್ಮದಿನ ಸಮಾರಂಭದಲ್ಲೇ ಸಾಬೀತಾಗಿದೆ. 

ಬೆಂಗಳೂರು, (ನ.19): ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಇಂದಿರಾಗಾಂಧಿ ಜನ್ಮದಿನ ಸಮಾರಂಭದಲ್ಲೇ ಸಾಬೀತಾಗಿದೆ. 

ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ..!

ಹೌದು...ಇಂದು (ಗುರುವಾರ) ಇಂದಿರಾಗಾಂಧಿ ಜನ್ಮದಿನ ಕಾರ್ಯಕ್ರಮದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಹಿರಿಯ ನಾಯಕರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾಯಕರುಗಳಿಗೆ ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾರೆ.