ಹಿಂದುತ್ವ ಆರೋಪದ ಬೆನ್ನಲ್ಲೇ ಠಾಕ್ರೆ ಕಚೇರಿಯಲ್ಲಿ ಕಾಣಿಸಿದ ಭಗವಾ ಧ್ವಜ!
- ಪತನದತ್ತ ಮಹಾರಾಷ್ಟ್ರ ಸರ್ಕಾರ, ಮುಂದಿನ ರಾಜಕೀಯ ಸಾಧ್ಯತೆಗಳೇನು?
- ಏಕನಾಥ ಶಿಂಧೆ ಬಂಡಾಯ ಗುಂಪಿನಲ್ಲಿ 42 ನಾಯಕರು
- ನಾನೇನು ತಪ್ಪು ಮಾಡಿದೆ? ಉದ್ಧವ್ ಠಾಕ್ರೆ ಪ್ರಶ್ನೆಗೆ ಏಕನಾಶ್ ಶಿಂಧೆ ಉತ್ತರ!
ಸಿಎಂ ಉದ್ಧವ್ ಠಾಕ್ರೆ ಮೇಲಿರುವ ಪ್ರಮುಖ ಆರೋಪ ಹಿಂದುತ್ವದಿಂದ ದೂರ ಸರಿದಿದ್ದಾರೆ ಅನ್ನೋದು. ಈ ಆರೋಪದ ಬೆನ್ನಲ್ಲೇ ಇದೀಗ ಸಿಎಂ ಠಾಕ್ರೆ ಕಚೇರಿಯಲ್ಲಿ ಭಾಗವಾ ಧ್ವಜ ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ ಶಿವಾಜಿ ಫೋಟೋ ಕೂಡ ಕಾಣಿಸಿಕೊಂಡಿದೆ.ಶಿವಸೇನೆಗೆ ಸೆಡ್ಡುಹೊಡೆದು ಬಂಡಾಯ ಎದ್ದಿರುವ ಏಕನಾಥ ಶಿಂಧೆ ಗುಂಪಿನಲ್ಲಿ ಒಟ್ಟು 42 ನಾಯಕರಿದ್ದಾರೆ. ಇದರಲ್ಲಿ ಪಕ್ಷೇತರ ನಾಯಕರು ಸೇರಿದ್ದಾರೆ. ಇತ್ತ ಶರದ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಯಕರನ್ನು ವಾಪಸ್ ಬರಲು ಸೂಚಿಸಿದ್ದಾರೆ.