Asianet Suvarna News Asianet Suvarna News

News Hour: ಕೋಲಾರ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಅಂತರ್ಯುದ್ಧ!

ಕೋಲಾರ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಅಂತರ್ಯುದ್ಧ ಶುರುವಾಗಿದೆ. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ರೆ ರಾಜೀನಾಮೆ ಬೆದರಿಕೆ ಅಸ್ತ್ರ  ಹಾಕಲಾಗಿದೆ. ಸಭಾಪತಿ ಕಚೇರಿಯಲ್ಲೇ ಶಾಸಕರ ಸಂಧಾನ ಪ್ರಹಸನ ನಡೆದಿದೆ.

ಬೆಂಗಳೂರು (ಮಾ.27): ಕರ್ನಾಟಕದಲ್ಲಿ ಎರಡು ರಾಜಕೀಯ ಪಕ್ಷಗಳ ಆಂತರಿಕ ಬೇಗುದಿ ಬುಧವಾರ ಸುದ್ದಿಯಾಗಿದೆ. ಕೋಲಾರ ಟಿಕೆಟ್‌ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ ಪ್ರಾರಂಭವಾಗಿದ್ದರೆ, ರಾಯಚೂರು ಬಂಡಾಯಕ್ಕೆ ಬಿಜೆಪಿ ಥಂಡಾ ಹೊಡೆದಿದೆ.

ಈ ನಡುವೆ ಬಿಜೆಪಿ ಹೈಕಮಾಂಡ್‌, ಮಾಜಿ ಸಚಿವ ಗೋವಿಂದ್ ಕಾರಜೋಳಗೆ ಚಿತ್ರದುರ್ಗ ಟಿಕೆಟ್​ ಘೋಷಣೆ ಮಾಡಿದೆ. ಸ್ಥಳೀಯರ ವಿರೋಧ ಮಧ್ಯೆಯೂ ಹೈಕಮಾಂಡ್ ಕಾರಜೋಳ ಅವರಿಗೆ ಮಣೆ ಹಾಕಿದೆ. ಕೇಂದ್ರ ಸಚಿವ ನಾರಾಯಣ್​ ಸ್ವಾಮಿಗೆ ಟಿಕೆಟ್ ಮಿಸ್ ಆಗಿದೆ.

ಲೋಕಸಭಾ ಚುನಾವಣೆ ಸನಿಹದಲ್ಲಿ ಬಿಜೆಪಿಗೆ ಆಘಾತ; ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ

ಕೋಲಾರದ ಕಾಂಗ್ರೆಸ್‌ ಗಲಾಟೆಯನ್ನು ನೋಡಿರುವ ಜೆಡಿಎಸ್‌ ತನ್ನಅಭ್ಯರ್ಥಿ ಸಸ್ಪೆನ್ಸ್‌ ಇನ್ನೂ ಮುಂದುವರಿಸಿದೆ. ಕಾಂಗ್ರೆಸ್​ ಅಭ್ಯರ್ಥಿ ನೋಡಿ ಪಟ್ಟಿ ಬಿಡುಗಡೆ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. 2019ರ ಮ್ಯಾಜಿಕ್ ನಿರೀಕ್ಷೆಯಲ್ಲಿ ದಳಪತಿ ರಣತಂತ್ರ ಮಾಡುತ್ತಿದ್ದಾರೆ.
 

Video Top Stories