ಸಿದ್ದು ವಿರುದ್ಧ ಗುಡುಗಿ ಬಿಜೆಪಿ ಬೆಂಬಲಕ್ಕೆ ನಿಂತ ಮತ್ತೊಬ್ಬ ಶಾಸಕ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಮಹೇಶ್ ವಾಗ್ದಾಳಿ/ ಗೆದ್ದು ಬಂದು ಮಂತ್ರಿಯಾದವರನ್ನು ಅನರ್ಹರು ಎಂದು ಕರೆಯುವುದು ತಪ್ಪು/ ಸಾಧ್ಯವಾದರೆ ಕುಳಿತು ಮಾರ್ಗದರ್ಶನ ನೀಡಲಿ
ಚಾಮರಾಜನಗರ(ಫೆ. 07) ಗೆದ್ದು ಬಂದು ಮಂತ್ರಿಯಾದವರನ್ನು ಮತ್ತೆ ಮತ್ತೆ ಅನರ್ಹರು ಎಂದು ಕರೆಯುವುದು ಸರಿ ಅಲ್ಲ ಎಂದು ಶಾಸಕ ಎನ್. ಮಹೇಶ್ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ್ದಾರೆ.
ಸಿದ್ದರಾಮಯ್ಯನವರ ಒಂದು ಕಾಲಸ ಆಪ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾರ್ಗದರ್ಶನ ನೀಡಲಿ. ಅದನ್ನು ಬಿಟ್ಟು ಹೀಗೆ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.