Asianet Suvarna News Asianet Suvarna News

ಚಾಮುಂಡಿ ಚಾಲೆಂಜ್: ನನ್ನ ಯೋಗ್ಯತೆ ಇಡೀ ರಾಜ್ಯಕ್ಕೆ ಗೊತ್ತಿದೆ ಅಂದ್ರು ಸಾರಾ

ಚಾಮುಂಡಿ ಬೆಟ್ಟಕ್ಕೆ ತೆರಳುತ್ತೇನೆ, ವಿಶ್ವನಾಥ್ ಕೂಡಾ ಬರಲಿ| ಜೆಡಿಎಸ್ ಹಿರಿಯರ ಬಳಿ ಈ ಕುರಿತು ಚರ್ಚಿಸಿಲ್ಲ, ಇದು ನನ್ನ ವೈಯುಕ್ತಿಕ ವಿಚಾರ| ಸಾರಾ ಮಹೇಶ್ ಪ್ರತಿಕ್ರಿಯೆ| ಆಣೆ ಪ್ರಮಾಣಕ್ಕೆ ಸಾಕ್ಷಿಯಾಗುತ್ತಾ ಚಾಮುಂಡಿ ಸನ್ನಿಧಿ

ಮೈಸೂರು[ಅ.17]: ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಆಣೆ- ಪ್ರಮಾಣ ಸದ್ದು ಮಾಡುತ್ತಿದ್ದು, ಚಾಮುಂಡಿ ಸನ್ನಿಧಿ ಇದಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಸಾರಾ ಮಹೆಶ್ ಹಾಗೂ ವಿಶ್ವನಾಥ್ ನಡುವಿನ ಕಾಳಗ ಈಗ ಆಣೆ ಪ್ರಮಾಣದ ತಿರುವು ಪಡೆದಿದೆ.

ಚಾಮುಂಡಿ ಬೆಟ್ಟಕ್ಕೆ ತೆರಳುವುದಕ್ಕೂ ಮುನ್ನ ಮಾತನಾಡಿರುವ ಸಾರಾ ಮಹೇಶ್ 'ಚಾಮುಂಡಿ ಬೆಟ್ಟಕ್ಕೆ ನಾನು ತೆರಳುತ್ತಿದ್ದೇನೆ. ವಿಶ್ವನಾಥ್ ಕೂಡಾ ಬರಲಿ. ನನ್ನ ಮೇಲೆ ಮಾಡಿದ ಆರೋಪ ಅವರು ಸತ್ಯ ಎಂದು ಸಾಬೀತುಪಡಿಸಲಿ' ಎಂದಿದ್ದಾರೆ.

ಅಲ್ಲದೇ ಜವಿಶ್ವನಾಥ್ ಓರ್ವ ಹಿರಿಯ ರಾಜಕಾರಣಿ. ಅವರು ಹೇಗೆ ಮಾರ್ಗದರ್ಶನ ಮಾಡುತ್ತಾರೆ ಅದರಂತೆ ನಾವು ನಡೆಯುತ್ತೇವೆ ಎಂದಿದ್ದಾರೆ. ಅಲ್ಲದೇ ಇದು ನನ್ನ ವೈಯುಕ್ತಿಕ ವಿಚಾರ ಹೀಗಾಗಿ ಈ ಕುರಿತು ಪಕ್ಷದ ಹಿರಿಯರಾದ ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ಚರ್ಚಿಸಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಚಾಮುಂಡಿ ಚಾಲೆಂಜ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Video Top Stories