Asianet Suvarna News Asianet Suvarna News

ರಾಜ್ಯ ರಾಜಕಾರಣದ ಹೈವೋಲ್ಟೇಜ್ ಕ್ಷೇತ್ರ ಚಾಮುಂಡೇಶ್ವರಿ... ಜಿ. ಟಿ ದೇವೇಗೌಡರಿಗೆ ಠಕ್ಕರ್ ಕೊಡ್ತಾರಾ ಮಾಜಿ ಸಿಎಂ ಸಿದ್ದು ಶಿಷ್ಯ.!

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಚಾಮುಂಡೇಶ್ವರಿ ಬೀರಿಹುಂಡಿ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
 

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ,ಚಾಮುಂಡೇಶ್ವರಿ ಬೀರಿಹುಂಡಿ  ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲವನ್ನು ಕೂತು ಗಮನಿಸುತ್ತಿದ್ದು, ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಉತ್ತಮ ಕೆಲಸವನ್ನು ಯಾವ ಪಕ್ಷ ಮಾಡಿದೆ ಆ ಪಕ್ಷ ಗೆಲ್ಲುತ್ತದೆ. ಯಾವ  ಪಕ್ಷ ಬಂದರು ಯಾವ ಅಭಿವೃದ್ದ ಮಾಡಿಲ್ಲ  ಜಿಟಿ ದೇವೇಗೌಡ ಆಗಿರಬಹುದು, ಸಿದ್ದರಾಮಯ್ಯ ಆಗಿರಬಹುದು  ಸಾರ್ವಜನಿಕರಿಗಾಗಿ  ಕೆಲಸ ಮಾಡಲ್ಲ. ಅದಕ್ಕಾಗಿ ಪಕ್ಷೇತರ ಅಭ್ಯರ್ಥಿಗೆ ಮತವನ್ನು ಹಾಕುತ್ತೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
 

Video Top Stories