Asianet Suvarna News Asianet Suvarna News

ನೆಂಟ ಯೋಗೇಶ್ವರಗೆ ಬಳುವಳಿಯಾಗಿ ಡಿಸಿಎಂ ಸ್ಥಾನ ತ್ಯಾಗ ಮಾಡಲಿ; ರೇಣುಕಾ ರಾಂಗ್

ಡಿಸಿಎಂ ಅಶ್ವಥ್ ನಾರಾಯಣ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಗರಂ/ ಸಿಪಿ ಯೇಗೇಶ್ವರ ಅವರಿಗೆ ಮಂತ್ರಿ ಕೊಡಬೇಕಾದರೆ ನೀವೇ ಸ್ಥಾನ ತ್ಯಾಗ ಮಾಡಿ/ ಮುಖ್ಯಮಂತ್ರಿಗಳ ಪರಮಾಧಿಕಾರ ಪ್ರಶ್ನೆ ಮಾಡುವ ಅಧಿಕಾರ ನಮಗೆ ಇಲ್ಲ

 

ಬೆಂಗಳೂರು(ಫೆ. 05)  ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ರಾಂಗ್ ಆಗಿದ್ದಾರೆ. ಸಿಪಿ ಯೋಗೇಶ್ವರ ಅವರನ್ನು ಮಂತ್ರಿ ಮಾಡಬೇಕು ಎಂದರೆ ಅಶ್ವಥ್ ನಾರಾಯಣ ಅವರೇ ಡಿಸಿಎಂ ಸ್ಥಾನ ತ್ಯಾಗ ಮಾಡಲಿ ಎಂದು ಹೇಳಿದ್ದಾರೆ.

10 ಮಂದಿಗೆ ಮಾತ್ರ ಮಂತ್ರಿ ಭಾಗ್ಯ? ಯಾರಿಗೆಲ್ಲ ಲಾಟರಿ

ನಾವು ಯಾವ ರೆಸಾರ್ಟ್ ಗೂ ಹೋಗಿಲ್ಲ. ಮುಖ್ಯಮಂತ್ರಿಗಳ ಪರಮಾಧಿಕಾರ ಪ್ರಶ್ನೆ ಮಾಡುವ ಅಧಿಕಾರ ನಮಗೆ ಇಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.