Asianet Suvarna News Asianet Suvarna News

ಸಂಪುಟ ವಿಸ್ತರಣೆ: ಚರ್ಚೆ ಹುಟ್ಟು ಹಾಕಿದ ನಳಿನ್ ಕುಮಾರ್ ಕಟೀಲ್ ಹೇಳಿಕೆ

ಸಂಪುಟ ವಿಸ್ತರಣೆ ಸಂಬಂಧ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ
 

ಬೆಂಗಳೂರು, (ಆ.01): ಸಂಪುಟ ವಿಸ್ತರಣೆಯೋ ಸಂಪುಟ ಪುನಾರಚನೆ ಬದಲಾಗಿ ಸಂಪುಟ ವಿಸ್ತರಣೆ ಮಾಡುವುದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ ತಿಂಗಳಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಇವೆ ಎನ್ನುತ್ತಿವೆ ಮೂಲಗಳು.

ಮೂರುಸ್ಥಾನ ಭರ್ತಿಗಷ್ಟೇ ಸಂಪುಟ ವಿಸ್ತರಣೆ ಸೀಮಿತ: ನಳಿನ್

 ಆದ್ರೆ, ಈ ಸಂಪುಟ ವಿಸ್ತರಣೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಲೆಕೆಡಿಸಿಕೊಂಡಂತಿಲ್ಲ. ನಳೀನ್‌ ಕುಮಾರ್ ಹೇಳಿಕೆ ನೋಡಿದ್ರೆ, ಇದಕ್ಕೆ ಅವರಿಗೆ ಸಂಬಂಧವಿಲ್ಲದಂತೆ ಹೇಳಿದ್ದಾರೆ. ಸಂಪುಟ ಚರ್ಚೆಯಿಂದ "ಕೈ ತೊಳೆಯುವ" ಪ್ರಯತ್ನವೋ? ಅಥವಾ ಬಿಎಸ್‌ವೈ ಜೊತೆಗಿನ ಸಮನ್ವಯ ಕೊರತೆಯ ಲಕ್ಷಣವಾ ಎನ್ನುವ ಪ್ರಶ್ನೆಗಳು ಉಧ್ಬವಿಸಿವೆ? 

Video Top Stories