Asianet Suvarna News Asianet Suvarna News

ರಣಭೂಮಿಯಲ್ಲಿ ರಣಕಲಿಗಳ ರಕ್ತಪ್ರತಿಜ್ಞೆ...ಸೋಲು-ಗೆಲುವಿನ ಅಖಾಡದಲ್ಲಿ ಏನಿದು ರಕ್ತ ರಾಜಕೀಯ..?

 ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ರಾಜಕಾರಣಿಗಳು ಪ್ರಚಾರದಲ್ಲಿ ಬಿಝಿಯಾಗಿದ್ದಾರೆ.  ಒಬ್ಬರದ್ದು 150 ಸೀಟುಗಳ ಶಪಥವಾದರೆ, ಮತ್ತೊಬ್ಬರದ್ದು 130 ಸೀಟುಗಳ ಪ್ರತಿಜ್ಞೆ, ಇವೆಲ್ಲದರ ಮಧ್ಯೆ ಈಗ ಶವಪೆಟ್ಟಿಗೆ ಕಥೆ. ರಕ್ತದಲ್ಲಿ ಬರೆದುಕೊಡ್ತೇನೆ ,ರಕ್ತದಲ್ಲಿ ಬರೆದುಕೊಡ್ತೇನೆ ... ಎಲ್ಲರ ಬಾಯಲ್ಲಿ ಇದೊಂದೆ ಮಾತು
 

 ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ರಾಜಕಾರಣಿಗಳು ಪ್ರಚಾರದಲ್ಲಿ ಬಿಝಿಯಾಗಿದ್ದಾರೆ.  ಒಬ್ಬರದ್ದು 150 ಸೀಟುಗಳ ಶಪಥವಾದರೆ, ಮತ್ತೊಬ್ಬರದ್ದು 130 ಸೀಟುಗಳ ಪ್ರತಿಜ್ಞೆ, ಇವೆಲ್ಲದರ ಮಧ್ಯೆ ಈಗ ಶವಪೆಟ್ಟಿಗೆ ಕಥೆ. ಈ ಕಥೆ ನಡೆಯುತ್ತಿರುವುದು ಕರ್ನಾಟಕ ಕುರುಕ್ಷೇತ್ರದಲ್ಲಿ,  ರಕ್ತದಲ್ಲಿ ಬರೆದುಕೊಡ್ತೇನೆ ,ರಕ್ತದಲ್ಲಿ ಬರೆದುಕೊಡ್ತೇನೆ ... ಎಲ್ಲರ ಬಾಯಲ್ಲಿ ಇದೊಂದೆ ಮಾತು.  ರಾಜ್ಯ ಕಂಡ ಮುತ್ಸದ್ಧಿ ನಾಯಕ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಹುದ್ದೆಯಂಥಾ ಜವಾಬ್ದಾರಿ ಸ್ಥಾನದಲ್ಲಿರುವ ಡಿಕೆ ಶಿವಕುಮಾರ್  ಈ ರಕ್ತಪ್ರತಿಜ್ಞೆಯ ಮಾಡಿದ್ದಾರೆ.ಇಷ್ಟು ದಿನ ಕರ್ನಾಟಕ ಕುರುಕ್ಷೇತ್ರದಲ್ಲಿ ಸದ್ದು ಮಾಡ್ತಾ ಇದ್ದದ್ದು 40% ಕಮಿಷನ್, ಲಿಂಗಾಯತ ಯುದ್ಧ, ಮೀಸಲಾತಿ ಸಮರ, ಜಾತಿ ಲೆಕ್ಕಾಚಾರ ಮತ್ತು ಗ್ಯಾರಂಟಿ ಘೋಷಣೆಗಳು. ಆದರೆ ಚುನಾವಣಾ ದಿನ ಹತ್ತಿರ ಬರುತ್ತಿದ ಹಾಗೇ ರಕ್ತಪ್ರತಿಜ್ಞೆ ಸದ್ದು ಮಾಡುತ್ತಿದೆ.  ಅಷ್ಟಕ್ಕೂ ಸೋಲು-ಗೆಲುವಿನ ಅಖಾಡದಲ್ಲಿ ಏನಿದು ರಕ್ತ ರಾಜಕೀಯ..? ಈ ವಿಡಿಯೋ ನೋಡಿ