Ground Report: ಉಡುಪಿಯಲ್ಲಿ ಕಾಂಗ್ರೆಸ್ಗೆ ಬಲಿಷ್ಠ ಅಭ್ಯರ್ಥಿಗಳ ಕೊರತೆ, ಬಿಜೆಪಿಯಲ್ಲಿ ಟಿಕೆಟಿಗೆ ಪೈಪೋಟಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಉಡುಪಿ ಎಲೆಕ್ಷನ್ ಗ್ರೌಂಡ್ ರಿಪೋರ್ಟ್ ಹೀಗಿದೆ.
ಉಡುಪಿ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಮೂರು ಪಕ್ಷಗಳ ನಡುವೆ ಹಣಾಹಣಿ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಬಂಟ ಮತ್ತು ಮೊಗವೀರ ಜಾತಿಗಳದ್ದೇ ಪ್ರಾಬಲ್ಯವಿದ್ದು , ಕಾಂಗ್ರೆಸ್ ಪಕ್ಷಕ್ಕೆ ಬಲಿಷ್ಠ ಅಭ್ಯರ್ಥಿಗಳ ಕೊರತೆ ಇದೆ. ಉಡುಪಿಯಲ್ಲಿ ಬಿಜೆಪಿ ಟಿಕೆಟಿಗೆ ಪೈಪೋಟಿ ನಡೆದಿದ್ದು, ಜಿಲ್ಲೆಯ 5 ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಬೈಂದೂರು ಬಿಜೆಪಿಯೊಳಗೆ ಭಾರೀ ಪೈಪೋಟಿ ಇದೆ.