Asianet Suvarna News Asianet Suvarna News

ಯುದ್ಧಕಾಲದ ಹೊತ್ತಲ್ಲಿ ಕೈ ಪಾಳೆಯಲ್ಲಿ ಸಾರಥಿ Vs ಸೇನಾಪತಿ ಕಾಳಗ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಈ ಮಧ್ಯೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಈಗಲೂ ಬೂದಿ ಮುಚ್ಚಿದ ಕೆಂಡದಂತಾಗಿದೆ.  

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಈಗಲೂ ಬೂದಿ ಮುಚ್ಚಿದ ಕೆಂಡ. ಇಬ್ಬರು  ಮೇಲ್ನೋಟಕ್ಕೆ ಒಂದಾಗಿದ್ರೂ ಒಳಗೊಳಗೇ ಸಿಎಂ ಪಟ್ಟಕ್ಕೆ ಇಬ್ಬರ ನಡುವೆ ಪ್ರತಿಸ್ಪರ್ಧೆ ಇದೆ. ಆದರೆ  ಮೊದಲು  ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರೋಣ ಎಂದು ನಿರ್ಧರಿಸಿದ್ದಾರೆ. ಸಿದ್ದು-ಡಿಕೆ ಜೋಡಿಯ ಒಗ್ಗಟ್ಟನ್ನು ನೋಡಿ ಇನ್ನೇನು ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಡ್ತು ಅಂದುಕೊಂಡಿದ್ದು,   ಅಷ್ಟರಲ್ಲಿ ಹಳೇ ಯುದ್ಧದಲ್ಲಿ ಹೊಸ ಕಿಚ್ಚು ಹೊತ್ತಿಕೊಂಡಿದೆ. ಖಾಸಗಿ ವಾಹಿನಿಯೊಂದರಲ್ಲಿ ಸಿದ್ದರಾಮಯ್ಯನವರು ಆಡಿದ ಮಾತು ಕೈ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಿ ಬಿಟ್ಟಿದೆ. ಅಷ್ಟಕ್ಕೂ ಸಿದ್ದರಾಮಯ್ಯ ಅಂಥದ್ದೇನು ಹೇಳಿದ್ರು..? ಏನಿತ್ತು ಆ ಸಂದರ್ಶನದಲ್ಲಿ..? ಈ ವಿಡಿಯೋ ನೋಡಿ 
 

Video Top Stories